|
ಸ್ವಲ್ಪದರಲ್ಲೆ ಭಾರತದ ಕೈ ತಪ್ಪಿದ ನೊಬೆಲ್
ಹೈದರಾಬಾದ್: ರಸಾಯನ ಶಾಸ್ತ್ರದ
ಕ್ಷೇತ್ರದಲ್ಲಿ ನೀಡಲಾಗುವ ಈ ವರ್ಷದ ನೊಬೆಲ್ ಪ್ರಶಸ್ತಿ ಅಮೇರಿಕದ
ವೈದ್ಯರುಗಳಾದ ರೋಜರ್ ಕಾನ್ಬರ್ಗ್ ಮತ್ತು ಎಂಡ್ರೂ ಫೈರ್ಗೆ ನೀಡಲಾಗುತ್ತಿದೆ.
ವಂಶವಾಹಿನಿಗಳ ತಟಸ್ಥೀಕರಣದ ಬಗ್ಗೆ ನಡೆಸಿದ
ಅಧ್ಯಯನಕ್ಕಾಗಿ ಅಮೇರಿಕಾ ವೈದ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
`ಪ್ರಾಣಿಗಳ ಜೀವ ವ್ಯವಸ್ಥೆಯಲ್ಲಿ ವಂಶವಾಹಿನಿಗಳ
ತಟಸ್ಥೀಕರಣ' ವಿಷಯದ
ಮೇಲೆ ಭಾರತೀಯ ವಿಜ್ಞಾನಿ ದಂಪತಿಗಳಾದ ಉತ್ಪಲ್ ಭದ್ರಾ ಮತ್ತು
ಅವರ ಪತ್ನಿ ಮನಿಕಾ ಭದ್ರಾ ಮಾಡಿದ ಸಂಶೋಧನೆಯ ಆಧಾರದ ಮೇಲೆಯೇ
ಕಾನ್ ಬರ್ಗ್ ಈ ಅಧ್ಯಯನ ನಡೆಸಿದ್ದಾರೆ. ಆದರೆ ವಂಶವಾಹಿನಿಗಳ
ತಟಸ್ಥೀಕರಣ ನಡೆಸಲು ರೈಬೋನ್ಯೂಕ್ಲಿಕ್ ಆಮ್ಲದ ಪ್ರಯೋಗ ನಡೆಸಬಹುದು ಎನ್ನುವುದನ್ನು
ಕಾನ್ ಬರ್ಗ್ ಕಂಡು ಹಿಡಿದಿದ್ದಾರೆ. ಈ ವ್ಯತ್ಯಾಸದಿಂದ ಭಾರತೀಯ
ದಂಪತಿಗಳು ನೊಬೆಲ್ ಪುರಸ್ಕಾರದಿಂದ ವಂಚಿತರಾಗಿದ್ದಾರೆ.
ಹೈದರಾಬಾದ್ನ `ಕೋಶ ಮತ್ತು ಸೂಕ್ಷ್ಮಾಣು
ಜೀವಶಾಸ್ತ್ರ ಕೇಂದ್ರ '
ದಲ್ಲಿ ವಿಜ್ಞಾನಿಗಳಾಗಿರುವ ಡಾ. ಉತ್ಪಲ್ ಭದ್ರಾ ಮತ್ತು ಅವರ ಪತ್ನಿ ಮನಿಕಾ
ಭದ್ರಾ ೧೯೯೭ ರಲ್ಲೇ ಈ ಬಗ್ಗೆ ಅಧ್ಯಯನ ನಡೆಸಿದ್ದರು. `ಫೈರ್ ನನ್ನ
ಆತ್ಮೀಯ ಗೆಳೆಯ ಅವರಿಗೆ ನೊಬೆಲ್ ಸಂದದ್ದು ನನಗೆ ಸಂತೋಷವಾಗಿದೆ'
ಎಂದು ಉತ್ಪಲ್ ಭದ್ರಾ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು
ಕಲಾಂ ಭೇಟಿ ಮಾಡಲಿರುವ ಅಫ್ಜಲ್ ಕುಟುಂಬ
ಬಂದ್ ಕರೆಗೆ ಓಗೊಟ್ಟ ಕರ್ನಾಟಕ
ಐಐಎಂ-ಎ ನಲ್ಲಿ ಓಬಿಸಿ ಕೋಟಾಗೆ ಅಸ್ತು
ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ
ದತ್ತ ಪೀಠ: ಕೋರ್ಟ್ ಆದೇಶವೇ ಅಂತಿಮ-ದೇವೇಗೌಡ
ಐಟಿ, ಬಿಪಿಓ ಸಂಸ್ಥೆಗೆ ತಲೆನೋವಾದ ಕರ್ನಾಟಕ ಬಂದ್
ಕೊನೆಯ ದಿನದ ಅಧಿವೇಶನ
ರಂಗಶಂಕರದಲ್ಲಿ ಅಕ್ಟೋಬರ್ ೮ ರಿಂದ ರಂಗೋತ್ಸವ
|