|
ಮಂಗಳೂರಿನಲ್ಲಿ ಉದ್ರಿಕ್ತ ಪರಿಸ್ಥಿತಿ
ಮಂಗಳೂರು: ಬುಧವಾರ ಕರ್ನಾಟಕ ಬಂದ್
ಆದ ನಂತರ ಮಂಗಳೂರು ಮತ್ತೊಮ್ಮೆ ಬಂದ್ ಆಚರಣೆಯಲ್ಲಿ
ತೊಡಗಿದೆ. ಆದರೆ ಇದು ಸ್ವಘೋಷಿತವಲ್ಲ. ಬಂದ್ಗೆ ಕಾರಣವಾದ ಘಟನೆ
ನಡೆದಿದ್ದು ಹೀಗೆ :
ಮಿನಿ ಬಸ್ನಲ್ಲಿ ಕಸಾಯಿಖಾನೆಗೆ ದನಗಳನ್ನು ಸಾಗಿಸಲಾಗುತ್ತಿತ್ತು.
ಮಿನಿ ಬಸ್ ಮುಂದೆ ಹೋಗುತ್ತಿದ್ದ ಎರಡು ವಾಹನಗಳಿಗೆ ಢಿಕ್ಕಿ ಹೊಡೆದುಕೊಂಡು
ಹೋಯಿತು. ಆ ಮಿನಿ ಬಸ್ ಅನ್ನು ಬೆನ್ನತ್ತಿ ಹೋದ ಸವಾರರಿಗೆ ಕಸಾಯಿ
ಖಾನೆ ತಲುಪಿದ ಮೇಲೆ ಕಸಾಯಿ ಖಾನೆಯವರು ಹೊಡೆದಿದ್ದಾರೆ.
ಈ ಘಟನೆಯಿಂದ ಎರಡು ಕೋಮಿನವರ ನಡುವೆ
ಘರ್ಷಣೆ ಉಂಟಾಗಿ ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯನ್ನು ವಿರೋಧಿಸಿ
ಬಿಜೆಪಿ ಮತ್ತು ಭಜರಂಗದಳದವರು ಬಂದ್ಗೆ ಕರೆ ನೀಡಿವೆ.
ಬಸ್ಗಳಿಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟದ ಘಟನೆಗಳು ನಡೆದಿವೆ. ಪೊಲೀಸರು
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು
ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ಸೇರಿದಂತೆ ಮೂಡುಬಿದ್ರೆ,
ಕಾರ್ಕಳ, ಮುಲ್ಕಿ, ಬಜ್ಪೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.
ಮಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ ೧೪೪ನ್ನು ವಿಧಿಸಲಾಗಿದೆ.







ಚಿತ್ರಕೃಪೆ :
ಡೈಜಿವರ್ಡ್.ಕಾಂ
ಇನ್ನಷ್ಟು
ಕಲಾಂ ಭೇಟಿ ಮಾಡಲಿರುವ ಅಫ್ಜಲ್ ಕುಟುಂಬ
ಬಂದ್ ಕರೆಗೆ ಓಗೊಟ್ಟ ಕರ್ನಾಟಕ
ಐಐಎಂ-ಎ ನಲ್ಲಿ ಓಬಿಸಿ ಕೋಟಾಗೆ ಅಸ್ತು
ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ
ದತ್ತ ಪೀಠ: ಕೋರ್ಟ್ ಆದೇಶವೇ ಅಂತಿಮ-ದೇವೇಗೌಡ
ಐಟಿ, ಬಿಪಿಓ ಸಂಸ್ಥೆಗೆ ತಲೆನೋವಾದ ಕರ್ನಾಟಕ ಬಂದ್
ಕೊನೆಯ ದಿನದ ಅಧಿವೇಶನ
ರಂಗಶಂಕರದಲ್ಲಿ ಅಕ್ಟೋಬರ್ ೮ ರಿಂದ ರಂಗೋತ್ಸವ
|