ಬೆಂಗಳೂರು: ಕಳೆದ ಮೂರು
ವರ್ಷಗಳಿಂದ ರಂಗ ಶಂಕರವು ನಾಟಕೋತ್ಸವವನ್ನು ಆಚರಿಸಿಕೊಂಡು
ಬರುತ್ತಿದೆ. ಈ ವರ್ಷ ಅಕ್ಟೋಬರ್ ೮ ರಿಂದ ಸತತ ೮ ದಿನಗಳ ಕಾಲ
ರಂಗಶಂಕರದಲ್ಲಿ ನಾಟಕೋತ್ಸವ ನಡೆಯಲಿದೆ. ಮೂರುದಿನಗಳ ಬರವಣಿಗೆಯ
ಕಾರ್ಯಾಗಾರ ಮತ್ತು `ಯುವ ನಿರ್ದೆಶಕರ ಉತ್ಸವ
ಈ ಉತ್ಸವದ ವಿಶೇಷತೆಗಳಾಗಿವೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ
ಅರುಂಧತಿ ನಾಗ್ ವಿವರಿಸಿದ ವಿಷಯಗಳು ಹೀಗಿವೆ:
ಫ್ಲವರ್ಸ್ ಕಾಟನ್, ನಂಬರ್ಸ್ ಇನ್ ದಿ ಡಾರ್ಕ್, ಕನಸೇ ಕನಸು,
ಜಮೀಲಾ ಬಾಯಿ ಕಲಾಲಿ, ಹೀಗೆ ಮುಂತಾದ ಐದು ಭಾಷೆಯ ಹಲವು
ಪ್ರಸಿದ್ಧ ನಾಟಕಗಳನ್ನು ರಿಯಾಯಿತಿ ದರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಉದ್ಯಮಿಗಳು, ಯುವ ನಿರ್ದೇಶಕರು ಏಕಾಂಕ ನಾಟಕ ಪ್ರದರ್ಶಿಸಲಿದ್ದಾರೆ.
`ಹಚ್
ಮೊಬೈಲ್
ಕಂಪೆನಿ ಪ್ರಾಯೋಜಕತ್ವ ವಹಿಸಲಿದೆ.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನಾಟಕಕಾರ
ಗಿರೀಶ್ ಕಾರ್ನಾಡ್ ನಾಟಕಕ್ಕೆ ಸಂಬಂಧಿಸಿದ ತೆರಿಗೆಗಳಿಗೆ ಸರ್ಕಾರ ವಿನಾಯಿತಿ
ನೀಡಬೇಕು ಎಂದು ಆಗ್ರಹಿಸಿದರು.