|
ರೈತರಿಂದ ಅತಿಕ್ರಮಣ ನಡೆದಿಲ್ಲ
ಬೆಂಗಳೂರು: ತುರಹಳ್ಳಿ ೩೪೩ ಎಕರೆ
ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಲಾಗಿದೆ ಎಂದು ಸಿಎನ್ಎನ್ ಐಬಿಎನ್
ಸುದ್ದಿ ವಾಹಿನಿ ಮಾಡಿರುವ ವರದಿಯನ್ನು ಉತ್ತರಹಳ್ಳಿ ಹೋಬಳಿ ಮನವರ್ತೆ
ಕಾವಲ್ನ ರೈತ ಹಿತರಕ್ಷಣಾ ಸಮಿತಿಯು ತಳ್ಳಿ ಹಾಕಿದೆ.
`ಈ ಜಾಗ ಅರಣ್ಯ ಪ್ರದೇಶದ ಅಡಿಯಲ್ಲಿ ಬರುವುದಿಲ್ಲ.
೧೯೮೭ ಮಾರ್ಚ್ನಲ್ಲಿ ರೈತರು ವ್ಯವಸಾಯವನ್ನು ಕೈಗೊಳ್ಳಲು ತನ್ನ
ಯಾವುದೇ ವಿರೋಧವಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ. ಇದಲ್ಲದೆ
ಇದರಲ್ಲಿ ೪೨ ಎಕರೆಗಳಷ್ಟು ಪ್ರದೇಶವನ್ನು ಬೆಂಗಳೂರು ನಗರಾಭಿವೃದ್ಧಿ
ಪ್ರಾಧಿಕಾರ ವಶಪಡಿಸಿಕೊಂಡಾಗ ಈ ಜಾಗವು ಕಂದಾಯ ಇಲಾಖೆಗೆ ಸೇರಿರುವುದರಿಂದ
ರೈತರಿಗೆ ೩.೬೪ ಕೋಟಿ. ರೂ ಪರಿಹಾರವನ್ನು ಆ ಇಲಾಖೆಯೇ ನೀಡುತ್ತದೆ
ಎಂದು ಪ್ರಾಧಿಕಾರ ಹೇಳಿದೆ.
ಇದರಿಂದ ೧೩೦ ರೈತಕುಟುಂಬಗಳು ಸಾಗುವಳಿ ಮಾಡುತ್ತಿರುವ
ಜಾಗವು ಅರಣ್ಯ ಇಲಾಖೆಗಲ್ಲದೆ ಕಂದಾಯ ಇಲಾಖೆಗೆ ಸೇರಿದೆ ಎಂದು
ತಿಳಿಯುತ್ತದೆ. ಆದ್ದರಿಂದ ಆ ಜಾಗವು ಆಕ್ರಮಿತವಾಗಿದೆ ಎನ್ನಲು ಬರುವುದಿಲ್ಲ.
ಸಿಎನ್ಎನ್ ಐಬಿಎನ್ ಸುದ್ದಿ
ವಾಹಿನಿ ಮಾಡಿರುವ ವರದಿ ನಿರಾಧಾರವಾಗಿದೆ
ಎಂದು ಗುರುವಾರ ಪತ್ರಕರ್ತರಿಗೆ ಸಮಿತಿಯ ಅಧ್ಯಕ್ಷ ಮೋಹನ್
ಕುಮಾರ್ ಮತ್ತು ದಲಿತ ರೈತರಾದ ಅಣ್ಣಯ್ಯಪ್ಪ ತಿಳಿಸಿದರು.
ಇನ್ನಷ್ಟು
ಬೆಳಗಾವಿ ಕಲಾಪ: ರಾಜ್ಯಪಾಲರ ಭಾಷಣ
ಉಗ್ರನ ಗಲ್ಲಿಗೆ ಕಾಶ್ಮೀರದಲ್ಲಿ ವಿರೋಧ
ಪಶ್ಚಿಮ ಆಸ್ಟ್ರೇಲಿಯಾವನ್ನು ಮಣಿಸಿದ ಕರ್ನಾಟಕ
ತಂಡ
ಬೆಂಗಳೂರಿನ ವಿಜ್ಞಾನಿಗೆ ಭಟ್ನಾಗರ್ ಪ್ರಶಸ್ತಿ
ಮಾಧ್ಯಮಿಕ ಶಾಲೆಗಳಿಗೆ ೫,೪೦೦ ಶಿಕ್ಷಕರ ನೇಮಕ
ಮೀಸಲಾತಿ ನೀಡಿಕೆಗೆ
ಮೋಯ್ಲಿ ಶಿಫಾರಸು
ಬೆಳಗಾವಿ ಅಧಿವೇಶನ: ವಿಚಾರಕ್ಕಿಂತ ಹಾರಾಟವೇ ಹೆಚ್ಚು
ಹುಬ್ಬಳ್ಳಿ ವಲಯಕ್ಕೆ ಸೈಬರ್ ಠಾಣೆ: ಗೃಹ ಮಂತ್ರಿ
ಈ-ಹಳ್ಳಿಗಳಿಗೆ ಸರ್ಕಾರದ `ನೆಮ್ಮದಿ' ಯೋಜನೆ
|