ದಾವಣಗೆರೆಯಲ್ಲಿ ಸಮಾಜವಾದಿಗಳ ಸಮಾವೇಶ
ದಾವಣಗೆರೆ: ಭಾನುವಾರ ನಗರದಲ್ಲಿ ಸಮಾಜವಾದಿ
ಪಕ್ಷದ ಬೃಹತ್ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ
ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್
ಯಾದವ್ ಉದ್ಘಾಟಿಸಿದರು.
ಸಮ್ಮಿಶ್ರ ಸರ್ಕಾರವನ್ನು ತರಾಟೆಗೆ
ತೆಗೆದುಕೊಂಡ ಮುಲಾಯಂ ಸಿಂಗ್ `ಕರ್ನಾಟಕದಲ್ಲಿರುವುದು
ಜಾತ್ಯಾತೀತ ಜನತಾದಳವಲ್ಲ. ಅಧಿಕಾರದ ಆಸೆಯಿಂದ ಕೋಮುವಾದಿ ಬಿಜೆಪಿ
ಜೊತೆ ಸಖ್ಯ ಬೆಳೆಸಿರುವ ಗೌಡರ ಜನತಾದಳ'. ಕರ್ನಾಟಕದ ಜನರು
ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸಮಾಜವಾದಿ ಪಕ್ಷವನ್ನು ಜಾರಿಗೆ
ತರಬೇಕು ಎಂದು ಹೇಳಿದರು.
`ಬಹಳ ದಿನ ಈ ಸರ್ಕಾರ ಆಡಳಿತದಲ್ಲಿರಲಾರದು.
ಮಧ್ಯಂತರ ಚುನಾವಣೆಗೆ ಸಿದ್ಧರಾಗಿ' ಎಂದು ರಾಜ್ಯ ಘಟಕದ
ಅಧ್ಯಕ್ಷ ಮತ್ತು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಬಂಗಾರಪ್ಪ
ನೆರೆದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು. ಸಭೆಯಲ್ಲಿ ಸಂಸದರಾದ
ಜಯಪ್ರದಾ, ಕೆ. ಅಮರ್ ಸಿಂಗ್ ಮತ್ತು ಜಯಾ ಬಚ್ಚನ್
ಉಪಸ್ಥಿತರಿದ್ದರು.