ಮಹಾಜನ್ ವರದಿ ಜಾರಿ ಕೇಂದ್ರವೇ ಹೊಣೆ:ಪಾಪು
ಬೆಳಗಾವಿ ಅಧಿವೇಶನದ ಬಗ್ಗೆ ಹಿರಿಯ ಲೇಖಕ,
ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಅಭಿಪ್ರಾಯಗಳು ಇಂತಿದೆ:
ನಾನು
೧೫ ವರ್ಷದಿಂದ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಸಿ ಎಂದು ಪ್ರತಿಪಾದನೆ
ಮಾಡುತ್ತಾ ಬಂದಿದ್ದೇನೆ. ಈಗ ಅಧಿವೇಶನ ನಡೆಯುತ್ತಿರುವುದು ಸಂತಸ
ತಂದಿದೆ.
ಬೆಂಗಳೂರಿನವರಿಗೆ
ಬೇರೆ ಕರ್ನಾಟಕದ ಭಾಗಗಳು ಕಾಣುತ್ತಿರಲಿಲ್ಲ. ನಮ್ಮನ್ನು ಯಾರು
ಕೇಳುತ್ತಿರಲಿಲ್ಲ. ಈಗ ಸರ್ಕಾರವೇ ನಮ್ಮ ಮನೆ ಬಾಗಿಲಿಗೆ ಬಂದಿದೆ.
ಬೆಳಗಾವಿ
ಕರ್ನಾಟಕದ ಅವಿಭಾಜ್ಯ ಅಂಗ ಇದರಲ್ಲಿ ಎರಡು ಮಾತಿಲ್ಲ. ಮಹಾಜನ್ ವರದಿಯನ್ನು
ಅನುಷ್ಠಾನ ತರಬೇಕಾಗಿರೋದು ಕೇಂದ್ರ ಸರ್ಕಾರ. ಅದಕ್ಕೆ ಅವರೇ ಹೊಣೆ.
೧೯೫೬,
೧೯೬೬ರಲ್ಲಿ ಮಹಾರಾಷ್ಟ್ರ ಸರ್ಕಾರ ಗಡಿ ವಿಷಯವಾಗಿ ಕೇಂದ್ರ ಸರ್ಕಾರಕ್ಕೆ
ಮೊರೆಹೋಗಿತ್ತು. ಆದರೆ ಮಹಾರಾಷ್ಟ್ರದ ಮನವಿಯನ್ನು ಸತತವಾಗಿ
ತಿರಸ್ಕರಿಸುತ್ತಾ ಬಂದಿರುವ ಸಂಸತ್ತಿನ ನಿರ್ಣಯವು ಶ್ಲಾಘನೀಯ.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ
ಬೆಳಗಾವಿಯಲ್ಲಿ ಹೆಚ್ಚಿನ ಬೆಂಬಲ ಇಲ್ಲ. ಅವರಿಗೆ ಬೆಂಬಲಿಸುತ್ತಿರುವವರು
ಹೊರಗಿನವರಾಗಿದ್ದಾರೆ. ಎಂಇಎಸ್ ಅವರು ಅನುಸರಿಸುತ್ತಿರುವ ಕ್ರಮ ಸರಿಯಲ್ಲ.