ಬೆಂಗಳೂರು: ಭಾರತ ಮತ್ತು ಜಪಾನ್
ಸಂಸ್ಕೃತಿಗಳ ಸಮ್ಮಿಲನಕ್ಕಾಗಿ ರವಿವಾರ ಬೆಂಗಳೂರಿನಲ್ಲಿ ಇಂಡೋ-ಜಪಾನ್
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ `ಇಕೆಬಾನಾ
?,
`ಬೋನ್ಸಾಯ್?ಗಳಂತಹ
ಜಪಾನ್ ಕರಕುಶಲ ವಸ್ತುಗಳು ಮತ್ತು ಮೈಸೂರಿನ ಸಾಂಪ್ರದಾಯಿಕ
ತೈಲ ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿಡಲಾಗಿತ್ತು. ಈ ಸಂದರ್ಭದಲ್ಲಿ
ಬೆಂಗಳೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ.ರಂಗನಾಥ್,
ಶ್ರೀ ಅಟ್ಸುಶಿ ತೊಯೊಶಿಮಾ, ಸಾಹಿತಿ ಜಯಂತ್ ಕಾಯ್ಕಿಣಿ, ಪ್ರೊ. ಮಿಜೋಕಮಿ
ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾನಿಲಯದ
ವಿದೇಶಿ ಭಾಷಾ ಇಲಾಖೆ, ಕೊಯೊ ಜಪಾನೀಸ್ ಸ್ಪೀಕಿಂಗ್ ಮೀಟ್ಅಪ್ ಗ್ರೂಪ್ ಮತ್ತು
ಬಿಎನ್ಕೆ ಬೆಂಗಳೂರು ನಿಹೊಂಗೊ ಕ್ಯೂಶಕೈ ಇವರ ಸಹಯೋಗದಲ್ಲಿ
ಏರ್ಪಡಿಸಲಾಗಿತ್ತು.