ಮೈಸೂರು: ಕರ್ನಾಟಕ ಪ್ರವಾಸೋದ್ಯಮ
ಇಲಾಖೆ ೨೦೦೬ರ ಮೈಸೂರು ದಸರಾ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ
ಮಾಡಿದ್ದು ಪ್ರಪಂಚದಾದ್ಯಂತ ಪ್ರವಾಸಿಗರ ಗಮನ ಸೆಳೆದಿದೆ.
ಜಗತ್ಪ್ರಸಿದ್ಧ ಕರ್ನಾಟಕ ದಸರಾಕ್ಕೆ ಬರುವ ಪ್ರವಾಸಿಗರಿಗೆ ಇಲಾಖೆ
ನಿರ್ಮಿಸಿರುವ ಮಾಹಿತಿ ಕೇಂದ್ರಗಳು ಪ್ರವಾಸಿಗರಿಗೆ ಅನುಕೂಲಮಾಡಿಕೊಟ್ಟಂತಾಗಿದೆ.
ದಸರಾದ ಪ್ರಚಾರಕ್ಕೆ ಕೈಗೊಂಡಿರುವ
ಕಾರ್ಯಕ್ರಮಗಳನ್ನು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಜಿ.
ಕುಮಾರ್ ನಾಯಕ್ ಮೈಸೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅದರ ಮುಖ್ಯಾಂಶಗಳು ಹೀಗಿವೆ:
-
ದಸರಾದ ಬಗ್ಗೆ ವಿವರಿಸುವ
ಈ-ಮೇಲ್ಗಳನ್ನು ೧೬,೦೦೦ ವಿಳಾಸಗಳಿಗೆ ಕಳುಹಿಸಲಾಗಿದೆ.
-
ಮುಖ್ಯ ಹೋಟೆಲ್ಗಳನ್ನು ಸಂಪರ್ಕಿಸುವ
೧೧ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ.
ದಸರಾ ಭಿತ್ತಿ ಚಿತ್ರಗಳನ್ನು ಐಟಿ ಉದ್ದಿಮೆಗಳ
ಉಪಹಾರ ಗೃಹಗಳಲ್ಲಿ ಮತ್ತು ಸ್ಟಾರ್ ಹೋಟೇಲ್ಗಳಲ್ಲಿ ಅಂಟಿಸಲಾಗಿದೆ.