ಮೈಸೂರಿನಲ್ಲಿ ಪ್ರವಾಸೋದ್ಯಮ ರ್ಯಾಲಿ
ಮೈಸೂರು: ಮೈಸೂರಿನ ಟ್ರಾವೆಲ್
ಏಜೆಂಟ್ ಸಂಘ ಸೆಪ್ಟೆಂಬರ್ ೨೭ ರಂದು ಪ್ರವಾಸೋದ್ಯಮ ರ್ಯಾಲಿಯನ್ನು
ಸಂಘಟಿಸಿದೆ.
ರ್ಯಾಲಿಯು ಮೈಸೂರು ಅರಮನೆಯ ಬಲರಾಮ
ದ್ವಾರದಿಂದ ಬೆಳಿಗ್ಗೆ ೧೦ ಗಂಟೆಗೆ ಹೊರಡಲಿದ್ದು, ಉಪ ಆಯುಕ್ತ ಎಸ್.
ಸೆಲ್ವಕುಮಾರ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.
ರ್ಯಾಲಿಯಲ್ಲಿ ಸೈಕಲ್, ಎತ್ತಿನ ಗಾಡಿ, ಸ್ಕೂಟರ್ ಮತ್ತಿತರ
ವಾಹನಗಳು ಪಾಲ್ಗೊಳ್ಳಲಿವೆ. ಜನರಿಗೆ ಪ್ರವಾಸೋದ್ಯಮದ ಬಗ್ಗೆ
ಜಾಗ್ರತಿ ಮೂಡಿಸಲು ಈ ರ್ಯಾಲಿಯನ್ನು ಕೈಗೊಳ್ಳುತ್ತಿರುವುದಾಗಿ ಸಂಘದ
ಅಧ್ಯಕ್ಷರಾದ ಶಾಂತಿನಾಥ್ ಬುಧವಾರ ಮೈಸೂರಿನಲ್ಲಿ ಪತ್ರಕರ್ತರಿಗೆ
ತಿಳಿಸಿದರು.