ಬೆಳಗಾವಿ: ಗೋವಾ ರಾಜ್ಯದ ವಿರೋಧದ ನಡುವೆಯೂಕರ್ನಾಟಕ ಸರ್ಕಾರ ವಿವಾದಾತ್ಮಕ `ಕಳಸ-ಬಂಡೂರಿ
ಯೋಜನೆಗೆ ಸೆಪ್ಟೆಂಬರ್ ೨೨ರಂದು ಶಿಲಾನ್ಯಾಸ ನೆರವೇರಿಸಲಿದೆ. ಶಿಲಾನ್ಯಾಸದ
ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ ಉಪಸ್ಥಿತರಿರುತ್ತಾರೆ.
ಸೆಪ್ಟೆಂಬರ್ ೧೭ ರಂದು ನಡೆದ ಸಂಪುಟ
ಸಭೆಯಲ್ಲಿ ಈ ವಿಷಯವನ್ನು ನಿರ್ಣಯಿಸಲಾಯಿತು ಎಂದು ಕರ್ನಾಟಕ
ಜಲಸಂಪನ್ಮೂಲ ಮತ್ತು ನೀರಾವರಿ ಸಚಿವ ಕೆ.ಎಚ್. ಈಶ್ವರಪ್ಪ ಬುಧವಾರ
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.