ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು
ತಕರಾರು
ನವ ದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ
ಮೋದಿಯವರ ಸರ್ಕಾರ ಬುದ್ಧ ಮತ್ತು ಜೈನರನ್ನು ಹಿಂದುಗಳ ಶ್ರೇಣಿಗೆ
ಸೇರಿಸಲು ಮಾಡಿರುವ ನಿರ್ಧಾರವನ್ನು ರಾಷ್ಟ್ರೀಯ ಅಲ್ಪಸಂಖ್ಯಾತ
ಆಯೋಗ ವಿರೋಧಿಸಿದೆ. ಕಾಂಗ್ರೆಸ್ನ ತೀವ್ರ ವಿರೋಧದ ನಡುವೆ
ಮಂಗಳವಾರ ಗುಜರಾತ್ ವಿಧಾನ ಸಭೆಯಲ್ಲಿ ಧ್ವನಿಮತದ ಮೂಲಕ
ಈ ಶಾಸನವನ್ನು ಅಂಗೀಕರಿಸಲಾಯಿತು.
ಈ ಶಾಸನವು ೨೦೦೩ರ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ
ಕಾಯಿದೆ ಮತ್ತು ೧೯೯೩ರ ರಾಷ್ಟ್ರೀಯ ಅಲ್ಪಸಂಖ್ಯಾತ ಕಾಯಿದೆಯನ್ನು
ಉಲ್ಲಂಘಿಸುತ್ತದೆ. ಆದ್ದರಿಂದ ಈ ಶಾಸನದಿಂದ ಉಂಟಾಗಬಹುದಾದ
ದುಷ್ಪರಿಣಾಮದ ಬಗ್ಗೆ ಗುಜರಾತ್ ಸರ್ಕಾರ ಮತ್ತು ಕೇಂದ್ರ ಸರ್ಕಾರ
ವಿಚಾರಮಾಡಬೇಕು ಎಂದು ಅಲ್ಪ ಸಂಖ್ಯಾತ ಆಯೋಗವು ಬುಧವಾರ ನೀಡಿದ
ಹೇಳಿಕೆಯಲ್ಲಿ ಆಗ್ರಹಿಸಿದೆ.