ಶೀಘ್ರದಲ್ಲೇ ವಿಪತ್ತುಗಳ ದತ್ತಸಂಚಯ
ತಯಾರಿಕೆ: ಇಸ್ರೋ
ಬೆಂಗಳೂರು: ಇಸ್ರೋ ಬಾಹ್ಯಾಕಾಶ
ಕೇಂದ್ರವು ವಿಪತ್ತುಗಳ ನಿರ್ವಹಣೆಗಾಗಿ ಗಣಕೀಕೃತ ಡಿಜಿಟೈಸ್ಡ್
ದತ್ತಸಂಚಯ(ಡೇಟಾಬೇಸ್) ತಯಾರಿಸುವುದಾಗಿ ಹೇಳಿದೆ. ಇದರಲ್ಲಿ
ತುರ್ತು ವಿಪತ್ತು ನಿರ್ವಹಣೆಗೆ ಬೇಕಾದ ಎಲ್ಲಾ ಪೂರಕ ಮಾಹಿತಿಯನ್ನು
ದತ್ತ ಸಂಚಯ ಒಳಗೊಂಡಿರುತ್ತದೆ.
ನೈಸರ್ಗಿಕ ವಿಪತ್ತುಗಳಾದ ಪ್ರವಾಹ, ಬರ ಹಾಗೂ
ಅಣು ಸೋರಿಕೆ, ರಾಸಾಯನಿಕ ಸೋರಿಕೆ ಮುಂತಾದವುಗಳನ್ನು ಎದುರಿಸಿ
ಸೂಕ್ತ ಪರಿಹಾರಗಳನ್ನು ಕೈಗೊಳ್ಳಲು ಈ ವ್ಯವಸ್ಥೆ ಉಪಯೋಗವಾಗಲಿದೆ
ಎಂದು ಇಸ್ರೋ ಸಂಸ್ಥೆಯ ಉಪ ನಿರ್ದೇಶಕ ಡಾ. ವಿ.ಎಸ್. ಹೆಗ್ಡೆ
ಹೇಳಿದ್ದಾರೆ.
ಸುಮಾರು ೨೭ ಕಾರ್ಯಾಲಯಗಳನ್ನು ಹಾಗೂ
ಇಲಾಖೆಗಳನ್ನು ಈ ಯೋಜನೆಗೆ ಹೊಂದಿಸಲಾಗುವುದು. ಇಂಜಿನೀಯರ್ಗಳ
ದಿನಾಚರಣೆಯ ಅಂಗವಾಗಿ `ನೈಸರ್ಗಿಕ ವಿಪತ್ತುಗಳ ನಿರ್ವಹಣೆಯಲ್ಲಿ
ಇಂಜಿನೀಯರ್ಗಳ ಪಾತ್ರ
ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದ ಡಾ. ಹೆಗ್ಡೆ ಕರ್ನಾಟಕದಲ್ಲಿ
೧೮ ಜಿಲ್ಲೆಗಳು ಬರದ ಎಚ್ಚರಿಕೆಯನ್ನು ಎದುರಿಸುತ್ತಿದೆ ಎಂಬ ವಿಷಯವನ್ನು
ಹೇಳಿದರು.
ಇನ್ನಷ್ಟು
ವಿಮೋಚನಾ
ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ
ಕೆ.ಕೆ.ಎನ್.ಸಿ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ
ಕಾರ್ಯಕ್ರಮಗಳು
ದಸರಾಕ್ಕೆ ಸಿಂಗಾರ ಗೊಂಡ ಮೈಸೂರು
ಮಾಜಿ ಕಾನೂನು ಸಚಿವ ಹಾವನೂರು ಇನ್ನಿಲ್ಲ
ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ
ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ
ಮುಷರಫ್ ಜೊತೆ ಮಾತುಕತೆ
ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ