ಶಶಿ ತರೂರ್ಗೆ ಮುಸ್ಲಿಂ ಅಭ್ಯರ್ಥಿ ಸವಾಲು
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ
ಜೋರ್ಡಾನ್ ರಾಜಕುಮಾರ ಮತ್ತು ವಿಶ್ವಸಂಸ್ಥೆಯ ರಯಭಾರಿ
ಜಾಯಿದ್ ಅಲ್ ಹುಸೇನ್ ೫ನೇ ಲಭ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಭಾರತದ ಶಶಿ ತರೂರ್ ವಿರುದ್ಧ ಸ್ಪರ್ಧಿಸುತ್ತಿರುವ
ಇವರು ಮುಸ್ಲಿಂ ಸಮುದಾಯದ ಮೊದಲನೆ ಉಮೇದುವಾರರಾಗಿದ್ದಾರೆ.
ಸೆ. ೫ ರಂದು ಶಿಕ್ಷಕರಿಂದ ಮೌನಾಚರಣೆ
ಇಡೀ ದೇಶ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆ
ಆಚರಿಸುತ್ತಿದ್ದರೆ ಮಧ್ಯಪ್ರದೇಶ ಶೈಕ್ಷಣಿಕ ಸಂಸ್ಥೆಗಳು `ಮೌನಾಚರಣೆ'
ಮಾಡಿದವು.
ಉಜ್ಜಯನಿಯ ಪ್ರೊ. ಎಚ್. ಎನ್. ಸಬರ್ವಾಲ್ ಹತ್ಯೆಗೆ
ಕಾರಣವಾದವರನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್
ಬಂದ್ಗೆ ಕರೆ ನೀಡಿತ್ತು. ಬಂದ್ ಸಮಯದಲ್ಲಿ ಉಜ್ಜಯಿನಿ ಶಾಂತಿಯುತವಾಗಿತ್ತು.
ಹುಷಾರಾಗಿರಿ ಉಗ್ರಗಾಮಿಗಳು ಕೋಲಾರಕ್ಕೆ ಕಾಲಿಟ್ಟಿದ್ದಾರೆ
ದೇಶದ ಅನೇಕ ಕಡೆ ತಾಣ ನಿರ್ಮಸಿಕೊಂಡಿರುವ
ಲಷ್ಕರೆ-ಎ ತೋಯ್ಬಾ ಕೋಲಾರ ಜಿಲ್ಲೆಯ ಚಿಂತಾಮಣಿ ಮತ್ತು
ಮುಳಬಾಗಿಲು ಮೂಲಕ ಕರ್ನಾಟಕಕ್ಕೂ ಕಾಲಿಟ್ಟಿವೆ ಎಂದು ಪ್ರಧಾನ ಮಂತ್ರಿ
ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿ ಸಭೆಯಲ್ಲಿ
ರಾಜ್ಯ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಈ ಆತಂಕಕಾರಿ ವಿಷಯವನ್ನು
ಬಹಿರಂಗಗೊಳಿಸಿದ್ದಾರೆ.
ಸಚಿನ್ ನೋಡಲು ಹೋಗಿ ತಲೆ ಚೆಚ್ಚಿಕೊಂಡರು
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಕಾಂಪೋಂಡ್
ಗೋಡೆ ಬಳಿ ಅಭ್ಯಾಸ ನಿರತರಾಗಿದ್ದ ಸಚಿನ್ ಹಾಗೂ ದ್ರಾವಿಡ್ ನೋಡುವ
ತವಕದಲ್ಲಿ ಗೋಡೆ ಹತ್ತಿ ಕಬ್ಬಿಣದ ಬೇಲಿಂi ಮೇಲೆ ಕುಳಿತ್ತಿದ್ದ ಸುಮಾರು
೩೦ -೩೫ ಮಂದಿಯ ಭಾರ ತಡೆಯಲಾಗದೆ ತುಕ್ಕು ಹಿಡಿದಿದ್ದ ಬೇಲಿ ಮುರಿದುಬಿದ್ದು
ಅನೇಕರು ಗಾಯಗೊಂಡರು. ಕೆಲವರಿಗೆ ತಲೆ ಪೆಟ್ಟು ಬಿದ್ದಿದ್ದು ಬೌರಿಂಗ್
ಆಸ್ಪತ್ರೆಯಲ್ಲಿ ಬೌಲಿಂಗ್ ಮಾಡೊ ಕನಸು ಕಾಣುತ್ತಾ ಮಲಗಿದ್ದಾರೆ.
ಇ-ಗಾಡಿಗೆ ನೊಂದಣಿ ಇಲ್ಲ ಲೈಸನ್ಸೂ ಬೇಕಿಲ್ಲ
ಏಸ್ ಮೋಟಾರ್ಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವ,
ವಿವಿಧ ಬಣ್ಣದಿಂದ ಕೂಡಿರುವ ಇ-ಸ್ಪೋರ್ಟ್ಸ್ ಹಾಗೂ ಇ-ಟ್ರೆಂಡಿ ಬೈಕ್ಗಳಿಗೆ
ಚಾಲನಾ ಪ್ರರವಾನಿಗೆ(ಲೈಸನ್ಸ್) ಹಾಗೂ ನೋಂದಣಿ(ಆರ್ಟಿಓ ರಿಜಿಸ್ಟ್ರೇಷನ್)
ಬೇಕಾಗಿಲ್ಲ. ೨೫೦ ವ್ಯಾಟ್ ನ ಡೀಸಿ ಮೋಟಾರ್ ಹೊಂದಿರುವ ವಿದ್ಯುತ್ ಚಾಲಿತ
ಬೈಕ್ನ ಬ್ಯಾಟರಿಯನ್ನು ಅರ್ಧ ದಿನ ಚಾರ್ಚ್ ಮಾಡಿದರೆ ಸಾಕು. ೬೦-
೮೦ ಕಿ.ಮೀ ನಿರಾಂತಕವಾಗಿ ನಿಶ್ಯಬ್ದವಾಗಿ, ಹೊಗೆರಹಿತ ವಾಹನದ ಸವಾರಿ ಮಾಡಬಹುದು
ಆದರೆ ಗಂಟೆಗೆ ೨೫ ಕಿ.ಮೀ ವೇಗದಲ್ಲಿ ಮಾತ್ರ ಚಲಿಸಬಹುದು. ಬೆಲೆ
ಕೇವಲ ೨೭,೦೦೦ ಅಷ್ಟೇ ಬೇಕಿದ್ದರೆ ಮರಿಯಪ್ಪನಪಾಳ್ಯದ ಶ್ರೀ ಮೂಕಾಂಬಿಕ
ಕಾಂಪ್ಲೆಕ್ಗೆ ಭೇಟಿ ಕೊಡಿ.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್ಬಿಯಿಂದ ಆನೇಕಲ್ ಬಳಿ ಸೂರ್ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು