ಭಾರತೀಯ
ಯಾತ್ರಿಕರಿಗೆ ಇರಾಕ್ನಲ್ಲಿ ಗುಂಡು
ಎಂಟು ಮಂದಿ ಪಾಕಿಸ್ಥಾನಿಗಳಿಗೂ ಗುಂಡು
ನವದೆಹಲಿ : ಮೂವರು ಭಾರತೀಯ
ಯಾತ್ರಿಕರನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಇರಾಕ್ನಲ್ಲಿ ನಡೆದಿದೆ.
ಪ್ರವಾದಿ ಮಹಮ್ಮದ್ರ ಮೊಮ್ಮಗ
ಇಮ್ಮಾಮ್ ಹುಸೇನ್ ಹುತಾತ್ಮರಾದ ಕರ್ಬಲಾ ಎಂಬ ಪ್ರದೇಶಕ್ಕೆ
ತೆರಳುತ್ತಿದ್ದ ಭಾರತೀಯ ಯಾತ್ರಿಕರನ್ನು ಕೊಲ್ಲಲಾಗಿದೆ ಎಂದು ವಿದೇಶಾಂಗ
ವ್ಯವಹಾರ ಖಾತೆ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮೂವರು ಪ್ರವಾಸಿಗರಲ್ಲಿ ಇಬ್ಬರು ಆಂಧ್ರಪ್ರದೇಶದ
ಹೈದರಾಬಾದ್ನವರಾಗಿದ್ದು ಮೊಹಿಯುದ್ದೀನ್ ಬೇಗ್, ಮಹಮ್ಮದ್
ಅಹ್ಮದ್ ಆಲಿ ಹಾಗೂ ಒಬ್ಬರು ವಿಶಾಖಪಟ್ನದ ಜಾಫರ್ ಮಶಾದ್ದಿ ಎಂದು
ಗುರುತಿಸಲಾಗಿದೆ.
ಮೂವರು ಭಾರತೀಯರೊಂದಿಗೆ ಎಂಟು ಮಂದಿ
ಪಾಕಿಸ್ಥಾನಿ ಯಾತ್ರಿಕರನ್ನೂ ಕೊಲ್ಲಲಾಗಿದೆ. ಆದರೆ ಗುಂಡು ಹೊಡೆದಿರುವ
ದುಷ್ಕರ್ಮಿಗಳ ಗುರುತು ಹಿಡಿಯಲಾಗಿಲ್ಲ.
ಇನ್ನಷ್ಟು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು'
ಬೆಂಗಳೂರಿನಲ್ಲಿ ಜೆ.ಸಿ.ರಸ್ತೆಯಲ್ಲಿ ಟ್ರಾಫಿಕ್ ನಿಷೇಧ
ಕೊಂಕಣಿಗರಿಗೆ ಗೋವಾ ಬೇಕು, ಕೊಡವರಿಗೆ ಸ್ವತಂತ್ರ
ಹೈಟೆಕ್ ಓಣಂ: ಆನ್ಲೈನ್ ಹೂ ಜೋಡಣೆ ಸ್ಪರ್ಧೆ
ಗಡಿವಿವಾದ: ರಾಜ್ಯಕ್ಕೆ ಕೈ ಕೊಟ್ಟ ಕೇಂದ್ರಸರ್ಕಾರ
ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ
ವಿಶ್ವಕನ್ನಡ ಸಮ್ಮೇಳನ - ೨೦೦೬
ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ
ಕೊಡುಗೆ