ವಿಕ್ರಾಂತ ಕರ್ನಾಟಕದ
ದ್ವಿತೀಯ ಸಂಚಿಕೆಯಲ್ಲಿ:
ಮನೆಯ ಒಳಗೂ ಹೊರಗೂ...
ನಿಮ್ಮ ಪತ್ರಿಕೆಯ ಸ್ಪೆಷಾಲಿಟಿ ಏನು?
ತ್ರಿಕೆ ಹೊರಬರುವವರೆಗೂ ವಿಕ್ರಾಂತ
ಕರ್ನಾಟಕ ವಾರಪತ್ರಿಕೆಯ ಬಗೆಗೆ ಕೇಳಿಬಂದದ್ದು ಇಂಥ ಕುತೂಹಲದ
ಪ್ರಶ್ನೆಗಳೇ. ಕನ್ನಡದಲ್ಲಿ ಪತ್ರಿಕೆಗಳಿಗಂತೂ ಕೊರತೆಯಿಲ್ಲ.
ಆರೋಗ್ಯ, ಕಾನೂನು, ಧರ್ಮ, ವೈಚಾರಿಕತೆ, ಸಿನಿಮಾ, ರಾಜಕೀಯ...
ಹೀಗೆ ಆರಂಭವಾಗಿ ಅಡುಗೆ, ಗೃಹಾಲಂಕಾರ, ತೋಟಗಾರಿಕೆಯವರೆಗೆ ಸಾಗಿ,
ದಂಪತಿಗಳ ಸರಸದ ಪಿಸುಮಾತು, ವಿರಸದ ಬೊಬ್ಬೆಯವರೆಗೂ ಪತ್ರಿಕಾರಂಗ
ಚಾಚಿಕೊಂಡಿದೆ. ಹಾಗಾಗಿ ಪತ್ರಿಕಾರಂಗ ನುಗ್ಗದ ಕ್ಷೇತ್ರವೇ
ಇಲ್ಲ ಎಂದರೂ ತಪ್ಪಲ್ಲ.
ಗೃಹ ಭಂಗ ಅತ್ತ ದೇವ್, ಇತ್ತ ರೇವ್

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಅವರ ವರ್ತಮಾನದ ಪರಿಸ್ಥಿತಿ ``ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.
ಇದಕ್ಕೆ ಪ್ರಮುಖ ಕಾರಣ ಆರು ತಿಂಗಳ ಹಿಂದೆ ಅವರಿಗೆ ಶಾಸಕರಿಂದ (ಬಹುತೇಕ
ಹೊಸಬರು) ಸಿಕ್ಕಿದ್ದ ಬೆಂಬಲಗ ಸಿಗುತ್ತಿಲ್ಲ ಎನ್ನುವುದು
ಜಗಜ್ಜಾಹೀರಾಗಿದ್ದು ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ.
ನೆತ್ತಿ ಮೇಲೆ ಕತ್ತಿ ಗೋವಾದ ಪಂಚತಾರಾ ರೆಸಾರ್ಟ್ನಿಂದ ಹೊರಟು
ದಾರಿಯುದ್ದಕ್ಕೂ ಸಿಕ್ಕ ಸಿಕ್ಕ ದೇವಸ್ಥಾನಗಳಲ್ಲೆಲ್ಲಾ ಪಲ್ಟಿ ಮೇಲೆ ಪಲ್ಟಿ
ಹೊಡೆದು ``ದೇವರ ಕೃಪೆಯಿಂದಲೇ ಮುಖ್ಯಮಂತ್ರಿಯಾದ
ಕುಮಾರಣ್ಣ.
ರೆಡ್ಡಿ ಬಾಂಬ್
ಬಳ್ಳಾರಿ ಗಣಿ ಮಾಲಿಕ ಗಾಲಿ ಜನಾರ್ಧನ
ರೆಡ್ಡಿ ನಿರ್ಮಿಸಿರುವ `ಗಣಿ- ಲಂಚ ಚಲನ ಚಿತ್ರ ನಮ್ಮ ಸಂಚಿಕೆ ನಿಮ್ಮ
ಕೈಗೆ ಸಿಗುವ ಮೊದಲೇ ಬಿಡುಗಡೆಗೊಂಡು ಕುಮಾರಸ್ವಾಮಿ ಸರ್ಕಾರ
ಎಷ್ಟು ರೋಚಕವಾಗಿ ಆರು ತಿಂಗಳ ಹಿಂದೆ ಗದ್ದುಗೆ ಏರಿದ್ದರೋ ಅಷ್ಟೇ
ರೋಚಕವಾಗಿ ಬೀಳುವುದು ಖಂಡಿತ.
ಒಂದು ವೇಳೆ ರೆಡ್ಡಿ ಸಿಡಿಸಿದ ಬಾಂಬ್ ಅಷ್ಟು ಶಕ್ತಿಯುತವಾಗಿರದೇ
ಇದ್ದರೆ, ಕೆಲವು ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಪಕ್ಷದ ಕೆಲವು
ದೊಡ್ಡ ತಲೆಗಳಂತೂ ಉರುಳುವುದು ಶತಸಿದ್ಧ.
ಕಾಲ್ಸೆಂಟರ್ ಕಾಲಿಂಗ್ !
ಕಾಲ್ ಸೆಂಟರ್ಗಳಲ್ಲಿ ಕೆಲಸ ಮಾಡುವ ಹುಡುಗಿಯರ
ಸಂಖ್ಯೆ ದೊಡ್ಡದು. ಅವರ ಪಾಲಿಗೆ ಅಲ್ಲಿ ಕೆಲಸ ಮಾಡುವುದು ಸ್ವಾತಂತ್ರ್ಯ,
ತನ್ನತನ, ಸ್ವಾವಲಂಬನೆಯ ಪ್ರತೀಕ. ಈ ಉತ್ಸಾಹದಲ್ಲಿ ಕೆಲವು ಹುಡುಗಿಯರು
ತಮ್ಮ ಮಿತಿಗಳನ್ನು ಮೀರುವುದೂ ಇದೆ.
ಸಾಹೇಬರು ಏನು ಅಪರಾಧ ಮಾಡಿದ್ದಾರೆ?
ರಾಜ್ಯ ಪೊಲೀಸ್ ಮಹಾನಿರ್ದೇಶಕ ಬಿ.ಎಸ್.
ಸಿಯಾಲ್ ರಾಜ್ಯಾದ್ಯಂತ ಹರಡಿರುವ ಪೊಲೀಸ್ ಠಾಣೆಗಳಿಗೆ ಸುತ್ತೋಲೆಯೊಂದನ್ನು
ಹೊರಡಿಸಿದ್ದಾರೆ. ತಮ್ಮ ಭಾವಚಿತ್ರವನ್ನು ಎಲ್ಲಾ ಠಾಣೆಗಳಲ್ಲೂ
ಕಡ್ಡಾಯವಾಗಿ ತೂಗುಹಾಕಬೇಕು ಎಂಬುದೇ ಸುತ್ತೋಲೆಯ ಸಾರಾಂಶ.
ಪರಭಾರೆಯಾಯಿತು ಹೆಬ್ಬಾಳ ಪಾರ್ಕ್
ಬೆಂಗಳೂರಿನ ಯಾವುದೇ ಮೂಲೆಗೆ ಹೋದರೂ
ಅಲ್ಲೊಂದು ಪಾರ್ಕಿಗೆ ಮೋಸವಿರಲಿಲ್ಲ. ಆದರೆ ಇನ್ನು ಮುಂದೆ ಚಿತ್ರ ಬದಲಾಗಲಿದೆ.
ಒಂದೊಂದೇ ಪಾರ್ಕು ಅಭಿವೃದ್ಧಿಯ ನೆಪದಲ್ಲಿ ಖಾಸಗಿ ಕಂಪೆನಿಯವರ
ಪಾಲಾಗಲಿದೆ.
ಟೋಟಲ್ ಕನ್ನಡ.ಕಾಂ
ಬೆಂಗಳೂರಿನ ಮಟ್ಟಿಗೆ ಇದೊಂದು ಹೊಸ ಪ್ರಯೋಗ,
ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂ ಭಾಷೆಗಳ ಮಧ್ಯೆ
ನಲುಗುತ್ತಿರುವ ಕನ್ನಡ, ಟೋಟಲ್ ಕನ್ನಡ. ಕಾಂ ಮಳಿಗೆಯಲ್ಲಿ
ನಿರಾಳವಾಗಿ ಉಸಿರಾಡುತ್ತಿದೆ.
ಸೈಬರ್ ಭದ್ರತೆ
ಭಾರತದ ಸೈಬರ್ ಕಾನೂನು ತಜ್ಞ ಎಂದೇ
ಗುರುತಿಸಿಕೊಂಡಿರುವ ನಾ. ವಿಜಯ ಶಂಕರ್ ಅಂತರ್ಜಾಲದಲ್ಲಿ ಭದ್ರತೆಯ
ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ.
ನಿತ್ಯೋತ್ಸವ ಕವಿಗೀಗ ನವೋಲ್ಲಾಸದ ಕಾಲ
ನವೋದಯ, ನವ್ಯ, ಬಂಡಾಯ-ಯಾವುದೇ
ಪಂಥಕ್ಕೂ ಸೇರದ ಕವಿ ಡಾ. ಕೆ.ಎಸ್. ನಿಸಾರ್ ಅಹಮದ್ ೭೩ನೇ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ನವೋದಯದ ಭಾವಗೀತಾತ್ಮಕತೆಯನ್ನು,
ನವ್ಯದ ಬಂಡಾಯ ಧ್ವನಿಯನ್ನು ಸಮ್ಮಿಲನಗೊಳಿಸಿಕೊಂಡೇ ಹೊಸ ಬಗೆಯ
ಕಾವ್ಯ ನೀಡಿದವರು.
ಶ್ರೀದೇವಿಕಾ ಕತೆ
ಆಟೋಗ್ರಾಫ್ ಪ್ಲೀಸ್ ಹುಡುಗಿ ಸಂಜನಾಳ
ಕತೆ ಹಾಗಾದರೆ ಮೈ ಆಟೋಗ್ರಾಫ್ ಚಿತ್ರದ ಶ್ರೀದೇವಿಕಾಗೆ ದೆಸೆ
ತಿರುಗಿರುವುದು ಈಗ ಗಾಂಧಿನಗರದ ಅಪ್ಪಟ ಸುದ್ದಿ. ಅಷ್ಟೇನೂ ಬೆಡಗು
ಬಿನ್ನಾಣವಿಲ್ಲದ ಶ್ರೀದೇವಿಕಾಗೆ ಒಂದಾದ ಮೇಲೊಂದರಂತೆ ಚಿತ್ರಗಳು
ಸಿಗುತ್ತಲೇ ಇವೆ.
೧೮ನೇ ಕ್ರಾಸ್ ಮಲ್ಲೇಶ್ವರಂ
ಸುದೀಪ್ ನಂ-೭೩ ಶಾಂತಿನಿವಾಸ ಎಂಬ ಚಿತ್ರಕ್ಕೆ
ತನುಮನಧನ ಸಹಿತವಾಗಿ ಮುಂದಾಗಿದ್ದರೆ, ಅತ್ತ ಇಂಥದೇ ಹೆಸರನ್ನು
ಹೋಲುವ ಇನ್ನೊಂದು ಚಿತ್ರ ಶುರುವಾಗುತ್ತಿದೆ. ಅದೇ `೧೮ನೇ ಕ್ರಾಸ್ ಮಲ್ಲೇಶ್ವರಂ.
ಅಬ್ದುಲ್ ರಶೀದ್ ಕತೆ
ಮೈಸೂರಿನ ಶ್ರೀಮಂತ ಕಾಮ್ರೆ ಡ್ ಒಬ್ಬರ
ತೋಟದ ಮನೆಯಲ್ಲಿ ಭೂಕ್ರಾಂತಿಯ ಕುರಿತ ರಾಜಕೀಯ ಶಿಬಿರದಲ್ಲಿ
ಎರಡು ಜಡೆ ಹಾಕಿಕೊಂಡು ಕಸಬರಿಕೆ ಕಡ್ಡಿಯಂತೆ ಓಡಾಡಿಕೊಂಡಿದ್ದ
ದಾಕ್ಷಾಯಿಣಿಯನ್ನು ಮಂದಣ್ಣ ಮತ್ತು ನಾನು ದ್ರಾಕ್ಷಿ ಎಂತಲೇ
ಕರೆಯುತ್ತಿದ್ದೆವು. ತರಗತಿಯೆಲ್ಲ ಮುಗಿದು ಕತ್ತಲಾಗಿ ಊಟಮುಗಿಸಿ
ಬೀಡಿಸೇದಿಕೊಂಡು ಹಳ್ಳಿಯವರ ಹಾಗೆ ಬಯಲಲ್ಲಿ ಕುಳಿತು ಪಾಯಿಖಾನೆಯ
ಸುಖವನ್ನು ಅನುಭವಿಸುತ್ತ ಆದಿನದ ರಾಜಕೀಯ ಪಾಠವನ್ನು ಮನನ
ಮಾಡಿಕೊಳ್ಳುತ್ತಲೇ ದಾಕ್ಷಾಯಣಿಯನ್ನೂ ನೆನಸಿಕೊಳ್ಳುತಿದ್ದೆವು.
ಬಚ್ಚನ್ಗೆ ಗಂಟೆ, ಸಚಿನ್ಗೆ ನಿಮಿಷ!
ಈತನಕ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ
ಆದಾಯವನ್ನು ಹಣಕಾಸಿನ ವರ್ಷವನ್ನು ಮಾನದಂಡವನ್ನಾಗಿಟ್ಟು
ಕೊಂಡು ನಿರ್ಧರಿಸಲಾಗುತ್ತಿತು
ಮನಸ್ಸನ್ನು ಓದುವ ಕಂಪ್ಯೂಟರ್
ಇನ್ನು ಮುಂದೆ ಕಂಪ್ಯೂಟರ್ನೆದುರು
ಕುಳಿತು ಕೆಲಸ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದಿರಿ; ಏಕೆಂದರೆ
ಪಿಸಿಯೆದುರು ಕೆಲಸ ಮಾಡುತ್ತಿರುವಾಗ ನಿಮ್ಮ ಕಣ್ಣಿನ ಹುಬ್ಬು, ವಿಚಿತ್ರ
ನೋಟ ಮತ್ತು ನೀವು ತಲೆಯಾಡಿಸುವ ಪರಿ- ಇವಿಷ್ಟನ್ನು ನೋಡಿಯೇ
ನೀವು ಏನನ್ನು ಯೋಚಿಸುತ್ತಿದ್ದೀರಿ ಎಂಬುದನ್ನು ನಿಮ್ಮ ಕಂಪ್ಯೂಟರು ಪತ್ತೆಹಚ್ಚಿಬಿಡುತ್ತದೆ!
ಮತ್ತಷ್ಟು ಲೇಖನಗಳು ನಿಮ್ಮನ್ನು
ಕಾಯುತ್ತಿವೆ.
ಇಂದೇ ಚಂದಾದಾರರಾಗಿ