ಹೃದಯದೊಡತಿ
ಗಣೇಶ್
ಭಟ್
ಬೆಂಗಳೂರು
w8.4u00@gmail.com
ಹೂವಾಗಿ ಅರಳಿ ಕಂಪನ್ನು ಇತ್ತಿದ್ದೆ ನನ್ನ ಜೀವನಕೆ ನೀ ಪ್ರಿಯಸಖಿ
ಹೊಂಬಣ್ಣದ ಹೂವೊಳಗೆ ಮಕರಂದ ತುಂಬಿದ್ದೆ
ನನ್ನ ಜೀವನಕೆ ಹೊಸ ಆಯಾಮ ನೀಡಿದ್ದೆ
ಕನಸಲ್ಲೂ ಕಾಡಿದ್ದೆ
ನನಸಲ್ಲಿ ನಗುತಿದ್ದೆ
ನಿನ್ನ ಜೊತೆಯಿರಲು ನಾ ಚಡಪಡಿಸಿದ್ದೆ
ನೆನಹುಗಳು ಕಾಡಿತ್ತು
ಕಲ್ಪನೆ ಗರಿಗೆದರಿತ್ತು
ಮನದಲ್ಲಿ ನೋವಿತ್ತು
ಏನೋ ಕಳೆದುಕೊಂಡಂತಿತ್ತು
ಆ ನಿನ್ನ ಪ್ರತಿ ಸ್ಪರ್ಶ
ಕುಲು ಕುಲು ನಗುವಿನಲ್ಲಿಯ ಹರ್ಷ
ನೆನಪಾಗಿ ಕಾಡುವುದು
ನನ್ನನ್ನು ಹಗಲಿರುಳು
ಕಣ್ಣಲಿ ತುಂಬಿದ್ದು
ನಾ ನಿನ್ನ ಬಯಸಿದ್ದು
ಬರಿ ಒಂದು ಕನಸೇನೊ ಎಂದು ಕನವರಿಸಿದ್ದು
ಮನಸೀಗ ತಿಳಿನೀರು
ಆಗಸದಲಿ ಚಂದ್ರಮ
ನನ್ನಲ್ಲಿ ನಿನ್ನ ಪ್ರತಿಬಿಂಬ
ಇನ್ನಷ್ಟು
ಅವಳ ನೋಟ
ಚೇತನ್ ಬರೆದ ಚುಟುಕಗಳು
ನಿನ್ನ ಒಲವ
ನೆನಪಿನಲ್ಲಿ.
. .
ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು
ಗೆಳೆಯನ ಮಾತು
ಭಾವನೆ-ಬವಣೆ
ಚೆಲುವೆ
ಪ್ರೇಮಿಗಳಾ ಹಬ್ಬ