ದೇವರು
ಶ್ರೀನಿವಾಸ ಪಿ ರ್ಯಾವಣಕಿ,
srinivasrp@gmail.com
ದೇವರ ಪೂಜೆ ಮಾಡು ನೀ ಜೋಡಿಸಿ ಕರವನ್ನು,
ಕರುಣಾಮಯಿ ನೀಡುವನು ನೀ ಕೇಳಿದ ವರವನ್ನು.
ದೇವರು ಎಲ್ಲಿ ಎಂದು ನೀ ಹುಡುಕದಿರು,
ನಮ್ಮ ಮನದಲ್ಲೇ ಇರುವನೆಂದು ಮರೆಯದಿರು.
ದೇವರಿಗಿಲ್ಲ ಯಾವುದೇ ಜಾತಿ,
ಅವನ ದೃಷ್ಟಿಯಲಿ ಎಲ್ಲರಿಗೂ ಒಂದೇ ನೀತಿ.
ದೇವರ ಮೆಚ್ಚಿಸಲು ಬೇಕು ಅಪಾರ ಭಕ್ತಿ,
ಭಕ್ತಿಯಿಂದ ಪೂಜಿಸಿದರೆ ಸಿಗುವುದು ನಮಗೆ ಮುಕ್ತಿ.
ನಾನು ಅನ್ನೋ ಅಹಂಕಾರವನ್ನು ಅಳಿಸು,
ನೀನೇ ಅನ್ನೋ ನೀತಿಯನ್ನು ಬೆಳೆಸು.
ಬಡಜನರ ಕಣ್ಣೀರನ್ನು ಒರೆಸು,
ಪ್ರೀತಿ ವಿಶ್ವಾಸದಿಂದ ಅವರ ದು:ಖವನ್ನು ಮರೆಸು.
ದೇವರೇ ಇಲ್ಲ ಅನ್ನುವರು ಅಳಿಯುವರು,
ದೇವರೇ ಎಲ್ಲ ಅನ್ನುವರು ಉಳಿಯುವರು.
ತಂದೆ-ತಾಯಿ ರೂಪದಲ್ಲಿ ಪೂಜಿಸು ನೀ ದೇವರನ್ನು,
ಎಂದೆಂದು ನೋಯಿಸದಿರು ನೀ ಅವರ ಮನಸನ್ನು.
ಕಾಯನ್ನು ಒಡೆ ನೀ ನಮ್ಮನ್ನು ಸದಾ ಕಾಯೆಂದು,
ಹಣ್ಣನ್ನು ಅರ್ಪಿಸು ಹಣ್ಣಾಗುವರೆಗೂ ಕೈ ಹಿಡಿ ಎಂದು.
ಕರ್ಪೂರದ ಹಾಗೆ ಸುಡು ನೀ ನನ್ನ ಪಾಪವನ್ನು,
ಬನ್ನಿ ದೀಪ ಹಚ್ಚಿ ಪೂಜಿಸೋಣ ಆ ಭಗವಂತನನ್ನು.
ಇನ್ನಷ್ಟು
ನನ್ನವಳು
ಕವನ
ನಿನಗಾಗಿ
ಕಾರಣ (ಹನಿಗವನ)
ಪ್ರಿಯ
ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ