Fonts Problem?

Downloads

? Wallpapers

? Vikrantakarnataka Weekly

ಪತ್ರಿಕೆ ಬಿಡುಗಡೆ

DU8? 17 g?z? ????i? ?q?U??/span> ?*????s?/a>

Monday, 28 July 2008 10:36 PM

ಗೆಳೆಯನ ಮಾತು 

ಪ್ರಶಾಂತ್ ಪಿ.ಎಂ

ಬೆಂಗಳೂರು.

pm.prashanth@siemens.com

 

ನನ್ನ ಗೆಳೆಯನ ಜೊತೆಯ ಮಾತು

ಎಂದೂ ಮರೆಯಲಾಗದ ಸವಿಯ ಮುತ್ತು.

ಇಂದು ನನಗೆ ಆ ಮಾತಿನ ನೆನಪು ಬಂತು,

ಮನಸ್ಸು ಹಿಡಿತವಿಲ್ಲದೇ ಹಿಂದಕ್ಕೆ ಸಾಗಿತ್ತು.

 

ಆ ಚೆಂದದ ದಿನಗಳ ನೆನಪು,

ಮತ್ತೇ ತರುತ್ತಿವೆ ಕಳೆದುಹೋದ ಅನುಭವದ ಓನಪು.

ಅಂದು ಕಳೆದ ಕ್ಷಣಗಳ ಸೊಂಪು,

ಇಂದು ತರುತ್ತಿದೆ ಅಂದಿನ ಪ್ರತಿಕ್ಷಣದ ಸವಿಸವಿ ಇಂಪು.

 

ಆ ದಿನದ ಮುಗಿಯದಂಥ ಮಾತುಗಳು,

ಈ ದಿನವು ಮುಕ್ತಾಯದ ಸೀಮಿತದ ಮಾತುಗಳು.

ಕಾರಣವಿಲ್ಲದ ಅಂದಿನ ಅನುಚಿತ ಮಾತುಗಳು,

ಇಂದು ಕಾರಣವಿದ್ದರೂ, ಮೂಕಭಾಷೆಯ `ಈ'-ಮೇಲಿನ ಮಾತುಗಳು.

 

ಅಂದಿನ ಸಹಜ ಗೇಲಿಯ-ಆಟದ-ಪಾಠದ ಮಾತುಗಳು,

ಇಂದಿನ ಕೃತಕ ಪೋಲಿಯ-ಮೋಜಿನ-ಹಾಸ್ಯದ `ಈ'-ಮೇಲಿನ ಮಾತುಗಳು.

ಎಲ್ಲಿಗೆ ಸಾಗಿದೆ ಈ ನನ್ನ-ಗೆಳೆಯನ ಮಾತುಗಳು,

ಕಾಣದ ನಾಗರಿಕ ಸಮಾಜದ ಪ್ರಜೆಗಳೆಂಬ ಪುರಸ್ಕೃತಕೋ, ಉದಾಸೀನದ ಭವ್ಯ ಸಾಮ್ರಾಜ್ಯದ ಆಧಿಪತ್ಯಕೋ?

 

-ಪಿ. ಎಂ. ಪ್ರಶಾಂತ್.

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com