|
ಇಂದಿನ ಕನ್ನಡಾಂಬೆ...
ಯುವಪ್ರೇಮಿ,
ಬೆಂಗಳೂರು.
erandra@gmail.com
ಮೆರೆತ ಮೊರೆತದ ಆಡಂಬರವ ಬೇಡಲಿಲ್ಲ
ಮನದಿ ಪ್ರೀತಿಯ ಕಣವು ಕಾಣದಂತಿಹುದಲ್ಲ
ಜೀವಧಾರೆಯ ಜೀವದೊಳು ಜಂಜಾಟ ಹುಟ್ಟಿಹುದು
ಇದುವೆ ಏನು ಮಮತೆಯು, ತಾಯ ಮೇಲಣ ಭೀತಿಯು..!!
ಮಡಿಲನಂಚಿಹಳು ಮೊರೆದು ಕರೆವಂತಹ ಮಕ್ಕಳಿಗೆ
ಮತದ ಮಾತಿಗೆ ಮನಕೊಡದೆ ಮುದ್ದಿಸಿಹಳು ಮಂದಹಾಸದಿ
ಹಾಲೆರೆದು ಹಾರೈಸಿಹಳು ಬೆಳಗಲು ನಾಳೆಯ ದೀವಿಗೆಯ
ದಿಟ್ಟತನದಿಂ ತಾಯ ತೆಕ್ಕೆಯ ಸುಡಲೊರಟಿಹಿರೆ ನೀವಿಂದು..!!
ಅಪರೊಪದ ಅಪರಾವತಾರಳು ನಮ್ಮ ಕನ್ನಡಾಂಬೆ
ಹೊಗಳುವುದಕೆ ಒಂದು ದಿನದ ಆಚರಣೆ ಹೆಚ್ಚಾಯ್ತೆ..!!
ಹುಲಿಗಳನು ಹಡೆದಂತೆ ಕೊಂಡಾಡಿದಳು ನಿಮ್ಮನೀಕೆ
ಹಸಿ ಮೊಳೆಗೆ ಹರಸಿದ ಅಂಗೈಯ್ಯ ಕಡಿಬೇಕೆ...!!
ನೊರ್ಕಾಲ ಬಾಳಲೆಂದು ಕನ್ನಡದ ಹಾಲೆರೆದಳು ನಮ್ಮಮ್ಮ
ಹಗೆಯ ಹೊಗೆಯ ನಂದಿಸೆ ನೀಡಿದಳು ಕನ್ನಡದ ಉಸಿರ
ಕಾವೇರಿ, ತುಂಗ, ನೇತ್ರಾವತಿಯ ಸಾರಂಗದೋಳ್ ಆಡಬಿಟ್ಟಳು
ತನು ಮನದ ಮೆರುಗಿಗೆ ಪ್ರಕೃತಿಯ ಸೌಧದೊಳು
ನೆಲೆಕೊಟ್ಟಳು..
ಇಂತಾಯ್ತು ಏಕೆ...!! ಮಂಕಿಡಿದು ಕೊಳೆತಂತೆ ನಿಮ್ಮೀಮನವು!!
ತಾಯ ಶೋಷಣೆಯೊಳು ಸಂತಸವ ಸವಿದಂತೆ ಮೆರೆದಿಹುದು
ಮೆರೆತದೊಳು ನಿಮ್ಮ ಮಾನವ ಮುರಿದ ಮನೆಯಂತಾಗಿಸಿ!!
ಹುಚ್ಚಿಡಿದ ಹೆಬ್ಬಾವಂತೆ ಹೆಡೆಬಿಡದೆ ಸಾವಿಗೆ ಹೊಡೆದಾಡಿಹಿರಿ
ಮರುಗದಿರು ನನ್ನ ತಾಯೆ, ನಿಮ್ಮ ಹಸಿ ಕಂದನಾನಿಹೆನು!!
ಹುಸಿ ಇಲ್ಲದು ನನ್ನಲಿ, ಅದುವೆ ಆಗಸದ ತಳದಷ್ಟು ದೊರ
ಮನದ ಕಣ ಕಣದೊಳಿಹುದು ಪ್ರೀತಿ, ಉಕ್ಕುತ ಮಹಾಪೊರ
ಅಮೃತದ ಬಿಂದೊಳು ಬಸಿದ ಆಯುಧವಿಹುದು, ಅದೆ ಕನ್ನಡ!!
ನಿಮ್ಮ ಕನಸನೆ ನನ್ನ ಮನಸೆಂದು ಕಟ್ಟುವೆನು ನಾಡ, ಅದೆ
ಕರ್ನಾಟಕ..!!
ಇನ್ನಷ್ಟು
ಕವಿಯಾದೆ ನಾನು
ಕನ್ನಡಾಂಬೆ.
. . . ನಿನ್ನ ಸ್ಥಿತಿಗೆ ಯಾರು ಹೊಣೆ
ಸೂರ್ಯಕಾಂತಿ
ಹೂವೇ...
ಪ್ರಕಾಶ ಮೂಲ್ಕಿರವರ ಚುಟುಕಗಳು
ಅಂತರಂಗ
ಜ್ಯೋತಿ
ಪಟಾಕಿ
ಪ್ರೀತಿಸಿದ
ಹುಡುಗಿ
ನನ್ನ
ಗೆಳತಿಗೆ?..
ಭ್ರಮೆಯ ನೆಪ(ನೆವ)ದಲಿ
ಚೆಲುವೆ
ಅಮ್ಮ
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
|