|
ನಾಯಕನಿಂದ ನಿರ್ದೇಶನದತ್ತ:ವಿನಾಯಕ ಜೋಶಿ
ಬೆಂಗಳೂರು: ತನ್ನ ನಟನೆಯಿಂದ ಜನರ ಮನಗೆದ್ದಿರುವ
ನಟ ವಿನಾಯಕ ಜೋಶಿ ಈಗ ನಿರ್ದೇಶನ ಮಾಡಲು ಹೊರಟಿದ್ದಾರೆ.
`ಪಂಚಮುಖಿ ನಟರ ಸಮೂಹ' ಆಡಲಿರುವ `ಶ್ರದ್ಧಾ' ಎಂಬ
ನಾಟಕವನ್ನು ನಿರ್ದೇಶಿಸಲಿದ್ದಾರೆ. ಅಕ್ಟೋಬರ್ ೧೫ ರಂದು ಹೆಚ್.ಎನ್.
ಕಲಾಕ್ಷೇತ್ರದಲ್ಲಿ ಹಾಗೂ ಅಕ್ಟೋಬರ್ ೧೭ ರಂದು ರಂಗಶಂಕರದಲ್ಲಿ
`ಶ್ರದ್ಧಾ' ನಾಟಕ ಪ್ರದರ್ಶನವಾಗಲಿದೆ. ಈ ಎರಡು
ರಂಗಮಂದಿರಗಳಲ್ಲೂ ರಾತ್ರಿ ೭:೦೦ಕ್ಕೆ ಪ್ರಾರಂಭವಾಗಲಿದೆ.
ವಿನಾಯಕ ಜೋಶಿಯ ಜೊತೆಗೆ ಶ್ರೀಪತಿ, ಮಧು ಕನೇಕಲ್,
ವಿನೋದ್, ವಸಂತ್ ಶಾಸ್ತ್ರಿ, ನೀತಾ ಮುಂತಾದವರು
ಅಭಿನಯಿಸುತ್ತಿರುವ ಈ ನಾಟಕಕ್ಕೆ ಪ್ರವೀಣ್ ಬಿ.ವಿ. ಅವರ ಸಂಗೀತವಿದೆ.
ಶ್ರೀನಿವಾಸ ವೈದ್ಯರವರ ಕಥೆಯಿದೆ.
ಆನಂದ್ ಆಚಾರ್ಯರವರು ನಿರ್ಮಾಣದ `ಶ್ರದ್ಧಾ' ನಾಟಕವನ್ನು ನೀವು
ನೋಡಬೇಕಾದರೆ ಕೂಡಲೇ ಸಂಪರ್ಕಿಸಿ: ೯೮೪೫೪೨೪೭೭೪, ೯೯೮೬೦೨೩೮೫೭.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್ಕೃಷ್ಣ ಮೇಲೆ ಹಲ್ಲೆ
ಬಿಎಸ್ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
|