|
ಸಾಂಗ್ಲಿಯಾನ ಈಗ ಹೊಸ ಅವತಾರದಲ್ಲಿ
ಬೆಂಗಳೂರು: ಸಂಸದ ಹಾಗೂ ಮಾಜಿ ಹೆಚ್.ಟಿ. ಸಾಂಗ್ಲಿಯಾನ
ಈಗ ಹೊಸ ಅವತಾರದಲ್ಲಿ ಜನರ ಮುಂದೆ ಕಾಣಿಸಲಿದ್ದಾರೆ.
`ಸಂತ' ಎಂಬ ಹೆಸರಿನ ಕನ್ನಡ ಚಲನಚಿತ್ರದಲ್ಲಿ ನಟಿಸುವುದಾಗಿ ಸಹಿ
ಮಾಡಿದ್ದಾರೆ. ತಮ್ಮ ಹೆಸರಿನ ಪಾತ್ರದಲ್ಲೇ ಬೆಂಗಳೂರು ನಗರ
ಪೊಲೀಸ್ ಆಯುಕ್ತರ ವೇಷ ಧರಿಸಲಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಿರುವ ಈ ಚಿತ್ರದಲ್ಲಿ
ನಾಯಕಿಯರಾಗಿ ಆರತಿ ಛಾಬ್ರಿಯಾ ಹಾಗೂ ಶ್ರೀದೇವಿಕಾ ನಟಿಸಿದ್ದಾರೆ.
ಸಂತೋಷ್ ಎಂಬ ರೌಡಿ ತನ್ನ ರೌಡಿ ಜೀವನವನ್ನು ಸಮಾಪ್ತಿಗೊಳಿಸಿ
ಕಡೆಗೆ ಪೊಲೀಸ್ ಆಯುಕ್ತರ ಮುಂದೆ ಶರಣಾಗುವ ಕಥೆಯನ್ನು
`ಸಂತ' ಚಿತ್ರ ಹೊಂದಿದೆ.
`ಈವರೆಗೂ ನನ್ನ ಬಗ್ಗೆ ಚಿತ್ರವನ್ನು ನಿರ್ಮಿಸುತ್ತಿದ್ದರು ಈಗ ನಾನೇ
ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಕೊಟ್ಟಿದೆ. ಆಯುಕ್ತರ ಪಾತ್ರ
ನನಗೆ ಸಹಜವಾಗಿ ಅಭಿನಯಿಸಲು ಅನುಕೂಲವಾಗಿದೆ' ಎಂದು
ಸಾಂಗ್ಲಿಯಾನ ಹೇಳಿದ್ದಾರೆ.
`ಸಂತ' ಚಿತ್ರ ಮುಂದಿನ ವರ್ಷದ ಜನವರಿ ಮೊದಲ ವಾರ
ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಾಂಗ್ಲಿಯಾನ ಅವರ
ಕಾರ್ಯವೈಖರಿಯ ಮೇಲೆ ಶಂಕರ್ ನಾಗ್ ಅಭಿನಯದಲ್ಲಿ ಎರಡು
ಹಾಗೂ ನಂತರ ದೇವರಾಜ್ ಅಭಿನಯದಲ್ಲಿ ಒಂದು ಚಿತ್ರ ನಿರ್ಮಾಣವಾಗಿ
ಯಶಸ್ವಿಯಾಗಿತ್ತು.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್ಕೃಷ್ಣ ಮೇಲೆ ಹಲ್ಲೆ
ಬಿಎಸ್ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
|