Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 12:40 PM

ಪ್ರೇಮ್..... ಚಿತ್ರೀಕರಣ ಏಕೆ ನಿಂತಿದೆ?........

ಚಿತ್ರವೊಂದು ಚಿತ್ರೀಕರಣ ಇಲ್ಲದೆ ನಿಲ್ಲವುದು ಯಾಕೆ? ಕಾರಣಗಳು ಸರಳ. ಮೊದಲನೆಯದಾಗಿ ಹಣಕಾಸಿನ ಮುಗ್ಗಟ್ಟು; ಎರಡನೆಯದಾಗಿ ನಾಯಕನಟರ ಕಾಲ್‌ಶೀಟ್ ರಗಳೆ; ಮೂರನೆಯದಾಗಿ ಸರಿಯಾದ ನಾಯಕಿ ಸಿಗದಿರುವುದು?
 

`ಪ್ರೀತಿ ಏಕೆ ಭೂಮಿ ಮೇಲಿದೆ?' ಎಂಬ ಚಿತ್ರಕ್ಕೆ ಇದ್ಯಾವ ರಗಳೆಯೂ ಇರಲಿಲ್ಲ. ಅಶ್ವಿನಿಯ ರಾಮ್ ಪ್ರಸಾದ್‌ರಂಥ ನಿರ್ಮಾಪಕರಿದ್ದರು, ನಿರ್ದೇಶಕ ಪ್ರೇಮ್ ನಾಯಕರಾಗಿದ್ದರು. ಹಾಗಾಗಿ ಅವೆಲ್ಲ ಗೊಂದಲಗಳಾಗಲು ಸಾಧ್ಯವಿರಲಿಲ್ಲ. ಆದರೆ `ಪ್ರೀತಿ.. ಏಕೆ..' ಮುಹೂರ್ತವಾಗಿ ಚಿತ್ರೀಕರಣವೇ ಆಗದಿರಲು ಕಾರಣವೇನು? ಎಂಬ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಅದರಲ್ಲಿ ಪ್ರಮುಖವಾದುದೆಂದರೆ ಇನ್ನೂ ಕತೆಯೇ ಸಿದ್ಧವಾಗಲಿಲ್ಲ ಅನ್ನುವುದು.
 

ಈ ಮಾತುಗಳೆಲ್ಲ ಸುಳ್ಳು ಅನ್ನುವ ನಿರ್ಮಾಪಕರು, ಪ್ರೇಮ್ ಇರುವಾಗ ಕತೆ ಸಿದ್ಧವಾಗದಿರಲು ಸಾಧ್ಯವೇ? ಅನ್ನುತ್ತಾರೆ. ತಂತ್ರಜ್ಞರು ಇಲ್ಲ ಅನ್ನುವ ಪುಕಾರೂ ಸರಿಯಲ್ಲ, ನಮ್ಮಲ್ಲಿ ಎಲ್ಲ ತಂತ್ರಜ್ಞರೂ ಇದ್ದಾರೆ ಅನ್ನುತ್ತಾರೆ. ಆದರೆ ಚಿತ್ರ ಆರಂಭವಾಗದಿರಲು ಕಾರಣ ಪಾರ್ಟನರ್‌ಶಿಪ್ ಗೊಂದಲವಂತೆ.
 

`ಪ್ರೀತಿ...'ಗೆ ಪ್ರೇಮ್ ಮತ್ತು ರಾಮ್ ಪ್ರಸಾದ್ ಇಬ್ಬರೂ ಪಾಲುದಾರರಂತೆ. ಆದರೆ ಆ ಪಾಲುದಾರಿಕೆಯ ಶೇಕಡಾವಾರು ಎಷ್ಟೆಷ್ಟು ಇರಬೇಕೆನ್ನುವ ತೀರ್ಮಾನವೇ ಇನ್ನೂ ಆಗಲಿಲ್ಲವಂತೆ. ೬೦:೪೦ ಇರಬೇಕೋ, ೭೦:೩೦ ಇರಬೇಕೋ ಎಂಬ ಚರ್ಚೆಯೇ ಇದುವರೆಗೂ ಮುಂದುವರಿದಿದ್ದು ಈಗ ಮುಗಿದಿದೆಯಂತೆ. ಆದರೆ ಎಷ್ಟಕ್ಕೆ ನಿರ್ಧಾರವಾಗಿದೆ ಎಂದು ಮಾತ್ರ ಪ್ರಸಾದ್ ಹೇಳುತ್ತಿಲ್ಲ. ಇಬ್ಬರಿಗೂ ಸರಿಹೊಂದುವಂತೆ ನಿರ್ಧರಿಸಲಾಗಿದೆಯಂತೆ.
 

ಅಂದ ಹಾಗೆ ಅವರು ಇವರು ಎಂದು ನಾಯಕಿಯರಿಗಾಗಿ ತಡಕಾಡುತ್ತಿದ್ದ ಪ್ರೇಮ್ ಮತ್ತು ಪ್ರಸಾದ್‌ಗೆ ಈಗ ಹಿಂದಿಯ `ತಮನಾ' ನಾಯಕಿಯಾಗಿ ಸಿಕ್ಕಿದ್ದಾರೆ. ಹಾಗಾಗಿ ಆ ಸಮಸ್ಯೆಯೂ ಮುಗಿದಿದೆ. ಅದೇ ರೀತಿ ಬಾಲಿವುಡ್‌ನ ಸದಾ ಸುಡುಸುಡುವ ಹುಡುಗಿ `ಮಲ್ಲಿಕಾ ಶೆರಾವತ್' ಕೂಡ ಒಂದು ಹಾಡಿಗಾಗಿ ಬಂದು ಕುಣಿದು ಕನ್ನಡದ ತೆರೆಯನ್ನು ಬೆಚ್ಚಗಾಗಿಸಲಿದ್ದಾರೆ. ಹಾಗಾಗಿ ಪ್ರೇಮ್‌ರ ಈ ಹೊಸ ಚಿತ್ರದಲ್ಲಿ ಏನಿಲ್ಲವೆಂದರೂ ಮಿನಿಮಮ್ ರೋಮಾಂಚನವಂತೂ ಗ್ಯಾರಂಟಿಯಾಗಿದೆ.

 

ಇನ್ನಷ್ಟು

೧೩ ಕೋಟಿ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ

ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ

ಸಂಸ್ಕೃತಿ ಇಲಾಖೆಯಿಂದ `ಪ್ರತಿಭಾನ್ವೇಷಣೆ'

ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ

ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ

ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ

ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ

ಬಗೆ ಹರಿದ ಭಾಷಾ ಕಲಿಕಾ ವಿವಾದ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com