ಜಗ್ಗೇಶ್ ನಾಯಕತ್ವದಲ್ಲಿ ಪೂಚಂತೆ ಕಾದಂಬರಿ
ತೆರೆಗೆ
ಬೆಂಗಳೂರು: ನವರಸನಾಯಕ ಜಗ್ಗೇಶ್ ಮಠ ಹಾಗೂ ಹನಿಮೂನ್
ಎಕ್ಸ್ ಪ್ರೆಸ್ ಚಿತ್ರದ ಸಾಧಾರಣ ಯಶಸ್ಸಿನ ನಂತರ ಮತ್ತೆ ಹುರುಪಿನಿಂದ
ಇನ್ನಷ್ಟು ಚಿತ್ರಕ್ಕೆ ಸಿದ್ಧವಾಗಿದ್ದಾರೆ.
ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಸಣ್ಣಕಥೆ `ಕೃಷ್ಣೇಗೌಡ
ಆನೆ ಯನ್ನು ನಿರ್ದೇಶಕ
ಎಸ್. ವಿ. ರಾಜೇಂದರ್ಸಿಂಗ್ ಬಾಬು ತೆರೆಗೆ ಅಳವಡಿಸುತ್ತಿದ್ದಾರೆ. ಜಗ್ಗೇಶ್
ನಾಯಕತ್ವದ ಈ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದೆ.
ನಿರ್ದೇಶಕ ರಾಜೇಂದರ್ ಸಿಂಗ್ ಬಾಬು ಚಿತ್ರೀಕರಣಕ್ಕೆ ಮಲೆನಾಡಿನ ಪರಿಸರದಲ್ಲಿ
ಜಾಗ ಹುಡುಕುತ್ತಿದ್ದಾರೆ. ಚಿತ್ರಕ್ಕೆ ಬೇಕಾದ ದೊಡ್ಡ ಆನೆ
ಶಿವಮೊಗ್ಗದಲ್ಲಿ ಸಿಕ್ಕಿದೆ. ಬಾಬು ರವರ ಹಿಂದಿನ ಚಿತ್ರ `ಮೋಹಿನಿ
೯೮೮೬೭೮೮೮೮೮'ಕ್ಕೆ ಹಣ ಹಾಕಿದ್ದ ನಿರ್ಮಾಪಕ ಎ.ಮೋಹನ್ ಈ ಚಿತ್ರವನ್ನು
ನಿರ್ಮಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಚಿತ್ರಕ್ಕೆ ಸಂಗೀತ
ನೀಡುತ್ತಿದ್ದಾರೆ. ಆನೆ ಹಾಗೂ ಜಗ್ಗೇಶ್ ಜೋಡಿ ಜನರನ್ನು ಮೋಡಿ ಮಾಡಲಿದೆ
ಎಂದು ಬಾಬು ಆಶಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್ಬಿಯಿಂದ ಆನೇಕಲ್ ಬಳಿ ಸೂರ್ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು