ಚಲನಚಿತ್ರ ಪ್ರಶಸ್ತಿ: ಭುಗಿಲೇಳುತ್ತಿರುವ
ಅಸಮಾಧಾನ
ಬೆಂಗಳೂರು: ಜಗ್ಗೇಶ್ ತಮಗೆ ನೀಡುತ್ತಿರುವ
ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ತಿರಸ್ಕರಿಸಿದ ಬೆನ್ನ ಹಿಂದೆಯೇ
ಈ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಯ ಬಗ್ಗೆ ಒಂದೊಂದೇ ಆರೋಪಗಳು
ಕೇಳಿಬರುತ್ತಿವೆ.
ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ `ನಾಯಿ
ನೆರಳು' ಹಾಗೂ ಕಿಶನ್ಗೆ ಬಾಲನಟ ಪ್ರಶಸ್ತಿ ತಂದುಕೊಟ್ಟಿರುವ `ಕೇರ್
ಆಫ್ ಫುಟ್ ಪಾತ್' ಇನ್ನು ಕೆಲವು ಚಿತ್ರಗಳು ಬಿಡುಗಡೆಯನ್ನೇ ಹೊಂದಿಲ್ಲ.
ಅವು ಹೇಗೆ ಅತ್ಯುತ್ತಮ ಚಿತ್ರಗಳಾಗುವವು?
ಅತ್ಯುತ್ತಮ ಹಾಸ್ಯನಟ, ಖಳನಾಯಕ,
ಕೋರಿಯೊಗ್ರಾಫರ್ ಪ್ರಶಸ್ತಿ ಈ ವರ್ಷ ನೀಡಲಾಗಿಲ್ಲ.
ಆಯ್ಕೆ ಸಮಿತಿಯು ಅಷ್ಟೂ ಚಿತ್ರವನ್ನು ವೀಕ್ಷಿಸಿ
ಪ್ರಶಸ್ತಿಯನ್ನು ನೀಡಿಲ್ಲ. ಏಕೆಂದರೆ ಆಯ್ಕೆ ಸಮಿತಿ ೯ ದಿನಗಳಲ್ಲಿ ೩೫
ಚಿತ್ರಗಳನ್ನು ನೋಡಬೇಕಿತ್ತು. ದಿನಕ್ಕೆ ಮೂರು ಚಿತ್ರಗಳನ್ನು ನೋಡಿದರೂ
೨೭ ಚಿತ್ರಗಳನ್ನು ಮಾತ್ರ ವೀಕ್ಷಿಸಲು ಸಾಧ್ಯ.
`ಕಮರ್ಷಿಯಲ್ ಚಿತ್ರಗಳನ್ನು ಪರಿಗಣಿಸದೆ
ಇರುವುದು ನೋವನ್ನುಂಟು ಮಾಡಿದೆ' ಎಂದಿದ್ದಾರೆ ಚಿತ್ರ ಸಾಹಿತಿ ನಾಗೇಂದ್ರಪ್ರಸಾದ್.
`ಆಯ್ಕೆ ಸಮಿತಿ ಎಲ್ಲ ಚಿತ್ರಗಳನ್ನು ವೀಕ್ಷಿಸದೆ
ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿ ಸರ್ಕಾರದ ಮುಖಕ್ಕೂ ಮಸಿ ಬಳಿದಿದೆ'
ಎನ್ನುವುದು ಭಾ.ಮಾ. ಹರೀಶ್ ದೂರು.