Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸಂಗೊಳ್ಳಿ ರಾಯಣ್ಣನಾಗಿ ಸರ್ಜಾ

ಕಿತ್ತೂರು ರಾಣಿಯಾಗಿ ಯಾರು ನಟಿಸುತ್ತಾರೆ ?

 

ಗಂಡುಗಲಿ ಕುಮಾರ ರಾಮ, ಕಲ್ಲರಳಿ ಹೂವಾಗಿ ಚಿತ್ರಗಳ ನಂತರ ಇನ್ನೊಂದು ಐತಿಹಾಸಿಕ ಕನ್ನಡ ಚಿತ್ರಕ್ಕೆ ಕಾಲ ಕೂಡಿಬಂದಿದೆ. ಉತ್ತರ ಕರ್ನಾಟಕದ ವೀರ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಆಧರಿಸಿ ಈ ಚಿತ್ರ ನಿರ್ಮಾಣವಾಗಲಿದೆ. ನಿರ್ಮಾಪಕರು ಉತ್ತರಕರ್ನಾಟಕದವರೇ ಆದ ಆನಂದ್ ಅಪ್ಪುಗೊಳ್ ಎಂಬುವರು. ಅವರು ಈ ಹಿಂದೆ `ತುಂಟ ಸೇರಿದಂತೆ ಎರಡು ಚಿತ್ರಗಳನ್ನು ನಿರ್ಮಿಸಿ ಕೈ ಸುಟ್ಟುಕೊಂಡವರು.

 

ಚಿತ್ರದ ನಿರ್ದೇಶಕ ನಾಗಣ್ಣ. ರಾಯಣ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ ನಟಿಸಲಿದ್ದಾರೆ. ಚಿತ್ರದ ಪ್ರಮುಖ ಪಾತ್ರ ರಾಣಿ ಕಿತ್ತೂರು ಚೆನ್ನಮ್ಮ. ಈ ಪಾತ್ರಕ್ಕೆ ಸೂಕ್ತ ನಟಿಗಾಗಿ ಶೋಧ ನಡೆಯುತ್ತಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com