ತಮಿಳು ಚಿತ್ರದಲ್ಲಿ
ಕನ್ನಡದ ದೂಷಣೆ
ವಿವಾದಿತ ಚಿತ್ರದ ಪ್ರದರ್ಶನ
ರದ್ದು
ಬೆಂಗಳೂರು: ನಾಡಿನ
ಮಹಾಪುರುಷರಾದ ಪುಲಕೇಶಿ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಕುರಿತಾಗಿರುವ
ತಮಿಳು ಚಿತ್ರ `ಹಿಂಸೈ ಅರಸನ್ ೨೩ನೇ ಪುಲಕೇಶಿ' ರಾಜ್ಯದೆಲ್ಲೆಡೆ ಬಿಡುಗಡೆಯಾಗಿದೆ.
ಜೊತೆಗೆ ಚಿತ್ರದಲ್ಲಿ ಪುಲಕೇಶಿ ಹಾಗೂ ಸಂಗೊಳ್ಳಿ ರಾಯಣ್ಣ ಅವರ ವ್ಯಕ್ತಿತ್ವಕ್ಕೆ ಮಸಿ
ಬಳಿಯುವಂತಹ ಅಂಶಗಳು ಇವೆ ಎಂಬುದು ವಿವಾದಕ್ಕೆಡೆ ಮಾಡಿಕೊಟ್ಟಿವೆ.
ಈ ಹಿನ್ನೆಲೆಯಲ್ಲಿ
ತಮಿಳು ಚಿತ್ರವನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಶುಕ್ರವಾರ
ನಗರದಲ್ಲಿ ಪ್ರತಿಭಟನೆ ನಡೆಸಿದವು.
ಈ ತಮಿಳು ಚಿತ್ರವನ್ನು
ಹಿಂದಕ್ಕೆ ಪಡೆಯದಿದ್ದರೆ ಉಗ್ರಹೋರಾಟ ನಡೆಸುವುದಾಗಿ ಸಂಗೊಳ್ಳಿ ರಾಯಣ್ಣ ಕನ್ನಡಿಗರ
ವೇದಿಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಎಚ್ಚರಿಸಿದೆ.
ಸಂಗೊಳ್ಳಿ ರಾಯಣ್ಣ
ಕನ್ನಡಿಗರ ವೇದಿಕೆ ಕಾರ್ಯಕರ್ತರು ಶೇಷಾದ್ರಿಪುರಂನಲ್ಲಿರುವ ನಟರಾಜ ಚಿತ್ರಮಂದಿರಕ್ಕೆ
ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರಿಂದ ಪ್ರದರ್ಶನವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಪತ್ರ:
`ಹಿಂಸೈ ಅರಸನ್ ೨೩ನೇ
ಪುಲಕೇಶಿ" ಚಿತ್ರದಿಂದ ಕನ್ನಡಿಗರ ಭಾವನೆಗೆ ಧಕ್ಕೆಯುಂಟಾಗಿದೆ. ಕೂಡಲೇ ಈ ಚಿತ್ರವನ್ನು
ಹಿಂದಕ್ಕೆ ಪಡೆಯಬೇಕೆಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಎಚ್.ಡಿ.ಗಂಗರಾಜು ಅವರು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
ತಾತ್ಕಾಲಿಕ ರದ್ದು:
ಚಿತ್ರದ ವಿರುದ್ಧ ಪ್ರತಿಭಟನೆಗಳು
ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರದ ನಟರಾಜ, ಪೂರ್ಣಿಮಾ, ಅಜಂತಾ, ಪುಷ್ಪಾಂಜಲಿ ಮತ್ತು
ಪಿವಿಆರ್ ಚಿತ್ರಮಂದಿರಗಳಲ್ಲಿ ಚಿತ್ರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ ಎಂದು ಪ್ರದರ್ಶಕರು
ತಿಳಿಸಿದ್ದಾರೆ.