|
ಡೈನಾಮಿಕ್ ದೇವರಾಜ್ ಈಗ ಪ್ರಚಂಡ ರಾವಣ
ಹಿರಿಯ ನಟ ಡೈನಾಮಿಕ್ ಹೀರೊ ದೇವರಾಜ್ ಈಗ ಪ್ರಚಂಡ ರಾವಣನ
ಪಾತ್ರದಲ್ಲಿ ಕಾಣಿಸಲಿದ್ದಾರೆ.

ಸುಮಾರು ೧೦,೦೦೦ಕ್ಕೂ ಅಧಿಕ ಪ್ರದರ್ಶನ ಕಂಡ `ಪ್ರಚಂಡ
ರಾವಣ' ಪೌರಾಣಿಕ ನಾಟಕದ ಮೇಲೆ ಈ ಚಿತ್ರವು ಆಧಾರಿತವಾಗಿದೆ.
ಕಣಗಾಲ್ ಪ್ರಭಾಕರ್ ಶಾಸ್ತ್ರಿ ರಚಿಸಿದ್ದ `ಪ್ರಚಂಡ ರಾವಣ' ನಾಟಕದ
ಮೂಲಕ ಖ್ಯಾತ ಖಳನಟ ದಿ. ವಜ್ರಮುನಿ ಪ್ರಸಿದ್ಧಿಗಳಿಸಿದ್ದರು.
ದೇವರಾಜ್ ಅವರ ಆಯ್ಕೆ ಮಾಡಿದ್ದ ಬಗೆಯೇ ಹೊಸತನದಿಂದ
ಕ ಡಿತ್ತು. ಎಸ್ಎಂಎಸ್ ಮೂಲಕ ರಾವಣನ ಪಾತ್ರಕ್ಕೆ ನಟನನ್ನು
ಆರಿಸುವ ಅವಕಾಶವನ್ನು ನಿರ್ಮಾಪಕರು ಜನರಿಗೆ ನೀಡಿದ್ದರು.
ಅದರಂತೆ ದೇವರಾಜ್ ಅವರ ಹೆಸರನ್ನು ಸೂಚಿಸಿ ಹೆಚ್ಚು ಜನ ಆಯ್ಕೆ
ಮಾಡಿದರು.
ರಾವಣನ ಪಾತ್ರಕ್ಕೆ ಆಯ್ಕೆಯಾದ ಬಗ್ಗೆ ಅತೀವ ಸಂತಸವನ್ನು
ದೇವರಾಜ್ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು
ಡಿಎಸ್ಎ ನಿಯಂತ್ರಣ ವಿಫಲ: ಎಚ್ಡಿಎಫ್ಸಿಗೆ ನೋಟೀಸ್
ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ
ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ
ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ
ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ
ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ
ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ
ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ
|