|
ಮಗಳನ್ನು ವಹಿಸಿಕೊಂಡು ಬಂದ ಅಮ್ಮ
ವಾರಣಾಸಿಯಲ್ಲಿ ಪ್ರದೀಪ್ ಸರ್ಕಾರ್ ಅವರ `ಚೂಡಿಯಾ' ಸಿನೇಮಾದ
ಚಿತ್ರಿಕರಣದ ಸಂದರ್ಭದಲ್ಲಿ ರಾಣಿ ಸಹ ಕಲಾವಿದರು ಮತ್ತು
ಚಿತ್ರೀಕರಣ ತಂಡದವರ ಮೇಲೆ ಹರಿಹಾಯ್ದ, ಪತ್ರಿಕಾಗೋಷ್ಠಿಯಿಂದ
ಎದ್ದುಹೋದ ಮತ್ತು ವಾರಣಾಸಿಯಲ್ಲಿ ಚಿತ್ರತಂಡದ ಜೊತೆ
ಬೆರೆಯದೆ ತಮ್ಮ ಕುಟುಂಬದವರ ಜೊತೆಯೇ ಸುತ್ತುತ್ತಿದ್ದ
ಸುದ್ದಿಯನ್ನು ಮಾಧ್ಯಮದವರು ದೊಡ್ಡದಾಗಿ ಬರೆದರು.
ಈ ವಿಷಯ ರಾಣಿ ಮುಖರ್ಜಿಯ ಅಮ್ಮ ಕೃಷ್ಣಾ ಮುಖರ್ಜಿಯವರನ್ನು
ಬಹಳ ಕೆರಳಿಸಿದೆ. `ರಾಣಿ ಯಾವತ್ತೂ ಬೆರೆಯವರಿಗೆ ನೋವುಂ ಟು
ಮಾಡಿದವಳಲ್ಲ. ಬಹಳ ಕಷ್ಟದ ಹಾದಿ ಸವೆಸಿ ಅವಳು ಈ ಮಟ್ಟಕ್ಕೆ
ಬೆಳೆದಿದ್ದಾಳೆ'. ಹಾಗಿರುವಾಗ ಅವಳು ಬೇರೆಯವರಿಗೆ ಹೇಗೆ
ನೋವುಂಟು ಮಾಡುತ್ತಾಳೆ? ಎಂದು ಈ ಸುದ್ದಿಯನ್ನೇ ಅಲ್ಲಗಳೆದರು.
`ಅಲ್ಲಾ ತಾಯಿ, ರಾಣಿ ಚಿತ್ರ ತಂಡದವರ ಜೊತೆ ಸೇರಿಕೊಳ್ಳಲೇ
ಇಲ್ಲವಂತೆ' ಎಂದು ಪ್ರಶ್ನಿಸಿದರೆ `ಹೌದು ಅವಳು ಆಗ ನಮ್ಮೊಡನೆ
ಇದ್ದಳು. ನಾವೆಲ್ಲ ವಾರಣಾಸಿಯ ಹೊಟೇಲೊಂದರಲ್ಲಿ ತಂಗಿದ್ದೆವು.
ಅವಳು ತನ್ನ ಕುಟುಂಬದವರ ಜೊತೆ ಕೆಲವು ಸಮಯ ಕಳೆದರೆ
ತಪ್ಪೆ?' ಎಂದು ಶ್ರೀಮತಿ ಮುಖರ್ಜಿ ತಿರುಗಿ ಪತ್ರಕರ್ತರನ್ನೇ
ಪ್ರಶ್ನಿಸುತ್ತಾರೆ.
ಇದೇನೇ ಇದ್ದರೂ ಇಷ್ಟೊಳ್ಳೆ ರಾಣಿ ಸಂಗಡಿಗರೊಂದಿಗೆ ಯಾಕೆ ಒರಟಾಗಿ
ವರ್ತಿಸಿದರೋ ಏನೋ?
ಇನ್ನಷ್ಟು
ಅಣುಬಂಧಕ್ಕೆ ಬಿಜೆಪಿ
ಅಸಮಧಾನ
ಯಶಸ್ವಿಯಾದ ರಕ್ಷಣಾ
ವೇದಿಕೆಯ ಕಾಲ್ನಡಿಗೆ ಜಾಥ
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
ಶಿವಮೊಗ್ಗದಲ್ಲಿ
ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ
ಬಹರೈನ್ನಲ್ಲಿ `ಬುರುಡೆ
ಭವಿಷ್ಯ' ಹಾಸ್ಯ ರೂಪಕ
|