|
ಚಿತ್ರರಂಗದ ಬಿಕ್ಕಟ್ಟು ಬಗೆಹರಿಯುವ ಸಂಭವ
ಬೆಂಗಳೂರು: ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ
ಮತ್ತು ತಂತ್ರಜ್ಞರ ಒಕ್ಕೂಟ ಮತ್ತು ನಿರ್ಮಾಪಕರ ನಡುವೆ
ಉಂಟಾದ ಸಮಸ್ಯೆ ಕೇಂದ್ರ ಮಂತ್ರಿ ಮತ್ತು ನಟ ಅಂಬರೀಷ್
ಮಧ್ಯಸ್ಥಿಕೆಯಲ್ಲಿ ಬಗೆಹರಿಯುವ ಲಕ್ಷಣ ಕಾಣಿಸುತ್ತಿದೆ.
ನಿರ್ಮಾಪಕರು ಮತ್ತು ಕಾರ್ಮಿಕ ಮಂಡಳಿಯವರು ಗುರುವಾರ
ಅಂಬರೀಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಶುಕ್ರವಾರ ಅಂಬರೀಷ್ ಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮ
ಒಂದರಲ್ಲಿ ಹಿರಿಯ ನಟ ವಿಷ್ಣುವರ್ಧನ್, ನಿರ್ಮಾಪಕ ರಾಕ್ಲೈನ್
ವೆಂಕಟೇಶ್, ಚಿತ್ರರಂಗ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಅಶೋಕ್
ಮುಂತಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಂಬರೀಷ್
ಕನ್ನಡ ಚಿತ್ರರಂಗದ ಈ ಬಿಕ್ಕಟ್ಟನ್ನು ಬಗೆ ಹರಿಸುವ
ಭರವಸೆಯನ್ನು ನೀಡಿದರು ಎನ್ನಲಾಗಿದೆ.
ಒಕ್ಕೂಟದ ಸದಸ್ಯರು ನಾಳೆ(ನ.೧೨) ರಾಜ್ ಕುಮಾರ್ ಪ್ರತಿಮೆ ಬಳಿ
ಒಂದು ದಿನದ ಉಪವಾಸ ಮಾಡಲು ನಿರ್ಧರಿಸಿದ್ದನ್ನು ರದ್ದುಪಡಿಸಿದೆ.
ಪ್ರಕಟಣೆಯೊಂದರಲ್ಲಿ ಅಶೋಕ್ ೯ ಜನ ನಿರ್ಮಾಪಕರೊಂದಿಗೆ
ಮಾತುಕತೆ ನಡೆಸಿ ತದನಂತರ ಅವರ ಮೇಲಿನ ಬಹಿಷ್ಕಾರವನ್ನು
ಹಿಂದಕ್ಕೆ ಪಡೆಯುವುದಾಗಿ ಒಕ್ಕೂಟದ ಅಧ್ಯಕ್ಷ ಅಶೋಕ್ ತಿಳಿಸಿದ್ದಾರೆ.
ಹಿನ್ನೆಲೆ: ಕರ್ನಾಟಕ ಚಲನಚಿತ್ರ ಕಾರ್ಮಿಕ ಒಕ್ಕೂಟ ೧೦ ಜನ
ನಿರ್ಮಾಪಕರಿಗೆ ಬಹಿಷ್ಕಾರ ಹಾಕಿ ಅವರ ಚಿತ್ರೀಕರಣ ಚಟುವಟಿಕೆಯಲ್ಲಿ
ಭಾಗವಹಿಸುವುದಿಲ್ಲ ಎಂದು ಹೇಳಿತ್ತು. ಇದಕ್ಕೆ ತಿರುಗೇಟಾಗಿ
ನಿರ್ಮಾಪಕರ ಮಂಡಳಿ ೨೦೦೪ರಲ್ಲಿ ಒಕ್ಕೂಟದೊಂದಿಗೆ ಮಾಡಿಕೊಂಡ
ಒಪ್ಪಂದವನ್ನು ರದ್ದು ಪಡಿಸಿತ್ತು.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|